For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ರಸಪ್ರಶ್ನೆ

 https://quizizz.com/admin/quiz/5f079d98a75adb001cb6b297

Share:

ವಿಶ್ವ ಪರಿಸರ ಸಂರಕ್ಷಣಾ ದಿನ

e ಇಂದು ಜುಲೈ 28, ವಿಶ್ವ ಪ್ರಕೃತಿ ಸಂರಕ್ಷಣಾ ದಿನ. ಪರಿಸರ ಸಂಪನ್ಮೂಲಗಳನ್ನು ಉಳಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು, ಮರುಬಳಕೆ ಮಾಡಲು, ಅದನ್ನು ಸಂರಕ್ಷಿಸಲು ಮತ್ತು ಅದನ್ನು ಹಾನಿಗೊಳಿಸುವುದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಪ್ರಪಂಚದಾದ್ಯಂತ ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಬನ್ನಿ ಜೊತೆಯಾಗಿ ಪರಿಸರ ಸಂರಕ್ಷಣೆ ಮಾಡೋಣ. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಕೃತಿಯ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳನ್ನು ರಕ್ಷಿಸಲು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು ಅವಶ್ಯಕ. ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಎಂದರೆ ಎಲ್ಲರೂ ಜೊತೆಯಾಗಿ ಪ್ರಕೃತಿಯನ್ನು ಉಳಿಸೋಣ ಮತ್ತು ಬೆಳೆಸೋಣ ಎಂಬುದಾಗಿದೆ. ಎಲ್ಲರೂ ಪ್ರಕೃತಿ ಸಂರಕ್ಷಣೆಯ ಪಣ ತೊಡೋಣ ಪ್ರಕೃತಿಯ ಸಂರಕ್ಷಣೆ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಬುದ್ಧಿವಂತಿಕೆಯ ನಿರ್ವಹಣೆ ಮತ್ತು ಬಳಕೆ. ನೈಸರ್ಗಿಕ ಅಸಮತೋಲನದಿಂದಾಗಿ, ನಾವು ಜಾಗತಿಕ ತಾಪಮಾನ ಏರಿಕೆ, ವಿವಿಧ ರೋಗಗಳು, ನೈಸರ್ಗಿಕ ವಿಪತ್ತುಗಳು, ಹೆಚ್ಚಿದ ತಾಪಮಾನ ಮುಂತಾದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ನಮಗೆ ತಿಳಿದಿದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸುವುದು ಅವಶ್ಯಕ. ಪರಿಸರವನ್ನು ಬುದ್ದಿವಂತಿಕೆಯಿಂದ ಉಪಯೋಗಿಸೋಣ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಭೂಮಿ ಸಾಕಷ್ಟು ಒದಗಿಸುತ್ತದೆ. ಆದರೆ ಮನುಷ್ಯ ಅದಕ್ಕಾಗಿ ದುರಾಸೆ ಪಡಬಾರದು ಎಂದು ಮಹಾತ್ಮ ಗಾಂಧಿಯವರೇ ಹೇಳುತ್ತಾರೆ. ಸ್ಥಿರ ಸಮಾಜಕ್ಕೆ ಅಡಿಪಾಯ ಹಾಕಲು ಆರೋಗ್ಯಕರ ಪರಿಸರ ಮುಖ್ಯ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಮತ್ತು ಸಂರಕ್ಷಿಸುವ ಸಲುವಾಗಿ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ದೈನಂದಿನ ಜೀವನಕ್ಕೆ ಬೇಕಾದ ನೀರು, ಗಾಳಿ, ಮಣ್ಣು, ಖನಿಜಗಳು, ಮರಗಳು, ಪ್ರಾಣಿಗಳು, ಆಹಾರ ಮತ್ತು ಅನಿಲಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಎಲ್ಲರೂ ಅವಲಂಬಿಸಿದ್ದೇವೆ. ಇದನ್ನೆಲ್ಲಾ ಪ್ರಕೃತಿ ನಮಗೆ ನಿಸ್ವಾರ್ಥದಿಂದ ಕೊಡುತ್ತಿದೆ. ಆದರೂ ಮನುಷ್ಯ ಅದನ್ನು ಉಳಿಸಿಕೊಳ್ಳದೆ ನಾಶ ಮಾಡುತ್ತಿದ್ದಾನೆ. ಭೂಮಿಯ ಸಂರಕ್ಷಣೆ ಎಂದರೆ ಭೂಮಿಯನ್ನು ಮತ್ತು ಸಂಪನ್ಮೂಲಗಳನ್ನು ಮನುಷ್ಯರ ಶಾಶ್ವತ ಒಳಿತಿಗಾಗಿ ಬುದ್ಧಿವಂತಿಕೆಯಿಂದ ಬಳಸುವುದು ಎಂದು ಗಿಫೋರ್ಡ್ ಪಿಂಚೋಟ್ ರವರು ಹೇಳುತ್ತಾರೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಪ್ರಕೃತಿಯ ಸಂರಕ್ಷಣೆ ಬಹಳ ಅವಶ್ಯಕ, ವಿಜ್ಞಾನಿಗಳು ಸಹ ಮುಂದಿನ ದಿನಗಳಲ್ಲಿ ಪ್ರಕೃತಿಯ ಅಳಿವಿನ ಬಗ್ಗೆ ನಮಗೆ ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ತಾಪಮಾನ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. “ಸಂರಕ್ಷಣೆ ಕೇವಲ ನೈತಿಕತೆಯ ಪ್ರಶ್ನೆಯಲ್ಲ, ಅದು ನಮ್ಮದೇ ಉಳಿವಿನ ಪ್ರಶ್ನೆಯಾಗಿದೆ”ಎನ್ನುತ್ತಾರೆ ದಲೈ ಲಾಮಾ. ಏರುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ನಗರೀಕರಣ, ಕೈಗಾರಿಕರಣ, ಅರಣ್ಯನಾಶದಿಂದ ತಾಪಮಾನ ಏರುತ್ತಿದೆ, ಮಳೆ ಇಳಿಮುಖವಾಗುತ್ತಿದೆ. ಪರಿಸರ ಮಾಲಿನ್ಯ, ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಇಂಥ ಸಮಸ್ಯೆಗಳನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಭಾರತ ಹೆಮ್ಮೆ ಪಡಬೇಕು ನಮ್ಮಲ್ಲಿ ಉತ್ತಮ ಪರಿಸರ, ಅರಣ್ಯ, ಪ್ರಾಣಿ ಸಂಪತ್ತುಗಳಿವೆ ಅದನ್ನು ಉಳಿಸಿಕೊಂಡು, ಜಾಗೃತೆಯಿಂದ ಕಾಪಾಡಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿಶ್ವದ ಒಟ್ಟು ಹುಲಿ ಗಣತಿಗೆ ಹೋಲಿಸಿದರೆ ಶೇ.70ರಷ್ಟು ಹುಲಿ ಸಂತತಿ ಭಾರತದಲ್ಲೇ ಇದೆ.. ಭಾರತ ಈ ಕುರಿತಾಗಿ ಹೆಮ್ಮೆ ಪಡಬೇಕು. ನಮ್ಮಲ್ಲಿ 30,000 ಆನೆಗಳು, 3000 ಖಡ್ಗಮೃಗಗಳು ಮತ್ತು 500 ಕ್ಕೂ ಹೆಚ್ಚು ಸಿಂಹಗಳಿವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಪರಿಸರವನ್ನು ನಾವು ಸಂರಕ್ಷಿಸಲು ಹಲವಾರು ಮಾರ್ಗಗಳಿವೆ.. ಮರುಬಳಕೆ ಮಾಡಬಹುದಾದ ಮತ್ತು ಜೈವಿಕ ವಿಘಟನೀಯ ಉತ್ಪನ್ನಗಳನ್ನು ಸಾಧ್ಯವಾದಷ್ಟು ಖರೀದಿಸಲು ಪ್ರಯತ್ನಿಸಿ. ಸಾಧ್ಯವಾದರೆ ಎಲ್ಲವನ್ನೂ ಮರುಬಳಕೆ ಮಾಡಿ. ನೀರಿನ ಬಳಕೆಯನ್ನು ಕಡಿಮೆ ಮಾಡುವುದು ಅವಶ್ಯಕ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ. ನಿಮ್ಮ ಕೆಲಸವನ್ನು ವಿದ್ಯುತ್ ಉಪಕರಣದಿಂದ ಮಾಡಿದ ನಂತರ ಅದನ್ನು ಆಫ್ ಮಾಡಿ. ಈ ರೀತಿಯಾಗಿ ಮಾಡಿದರೆ ವಿದ್ಯುತ್ ಶಕ್ತಿ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಮರಗಳನ್ನು ನೆಟ್ಟು ಭೂಮಿಯನ್ನು ಹಸಿರು ಮಾಡಿ. ತರಕಾರಿಗಳನ್ನು ಬೆಳೆಯಿರಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿಗಳು ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬೆರೆಸಿರಲಾಗಿರುತ್ತದೆ. ಆದ್ದರಿಂದ, ತರಕಾರಿಗಳನ್ನು ನೆಡುವುದು ಮತ್ತು ಸಾವಯವ ಆಹಾರವನ್ನು ಸೇವಿಸುವುದು ಉತ್ತಮ. ಬ್ಯಾಟರಿಗಳು ಪರಿಸರಕ್ಕೆ ಅಪಾಯಕಾರಿ ಎಂದು ನಮಗೆ ತಿಳಿದಿರುವಂತೆ, ಪುನರ್ ಬಳಕೆ ಮಾಡಬಹುದಾದ ಬ್ಯಾಟರಿಗಳನ್ನು ಬಳಸುವುದು ಉತ್ತಮ. ಮಾಲಿನ್ಯವನ್ನು ಕಡಿಮೆ ಮಾಡಿ. ಪ್ರಕೃತಿ, ಪರಿಸರ ಮತ್ತು ಶಕ್ತಿಯ ಸಂರಕ್ಷಣೆಯ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಿ. ಪರಿಸರ ಸಂರಕ್ಷಣೆಯ ಬಗ್ಗೆ ಮೂರು ಅಗತ್ಯ ಪದಗಳಿವೆ, ಅದು ಕಡಿಮೆ, ಬಳಕೆ ಮತ್ತು ಮರುಬಳಕೆ ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮಳೆ ನೀರು ಸಂಗ್ರಹ, ಶಕ್ತಿ ಸಂಪನ್ಮೂಲಗಳ ಮಿತ ಬಳಕೆ, ಪ್ಲಾಸ್ಟಿಕ್‌ ಬಳಕೆ ನಿಯಂತ್ರಿಸುವುದು. ಕ್ರಿಮಿನಾಶಕ ಬಳಕೆ ಕಡಿಮೆ ಮಾಡುವುದು ಇನ್ನಿತರ ಪರಿಸರ ಸಂರಕ್ಷಣಾ ವಿಷಯದ ಬಗ್ಗೆ ಗಮನ ಹರಿಸುವುದು ಜೊತೆಯಾಗಿ ಪರಿಸರ ಸಂರಕ್ಷಣೆ ಮಾಡೋಣ ಬನ್ನಿ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ಚತುಷ್ಪಥ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ವೃಕ್ಷಗಳ ಮಾರಣ ಹೋಮ ಮೊದಲಾದ ಕಾರಣಗಳಿಂದಾಗಿ ಪರಿಸರ ನಾಶ, ಹವಾಮಾನ ವೈಪರೀತ್ಯಗಳೂ ಉಂಟಾಗುತ್ತಿವೆ. ಅಲ್ಲದೆ, ಹೆಚ್ಚುತ್ತಿರುವ ಜನಸಂಖ್ಯೆ, ವಸತಿ ಸಮುಚ್ಚಯಗಳು, ಹೊಗೆ ಉಗುಳುವ ವಾಹನಗಳ ಸಂದಣಿ, ಪ್ಲಾಸ್ಟಿಕ್ ಇತ್ಯಾದಿಗಳಿಂದಾಗಿ ನಮ್ಮ ಪರಿಸರವು ಇಂದು ನಾಶವಾಗುತ್ತಿದೆ. ಮುಂದಿನ ಪೀಳಿಗೆಗೆ ಹಸಿರನ್ನು ನೀಡೋಣ.. ಪರಿಸರ ಸಂರಕ್ಷಣೆ ಕುರಿತಾಗಿ ಸಾಲು ಮರದ ತಿಮ್ಮಕ್ಕ ನಮಗೆ ಮಾದರಿ. ಪರಿಸರ ಸಂರಕ್ಷಣೆ ಕುರಿತಾಗಿ ಎಲ್ಲರೂ ಜಾಗೃತರಾಗಬೇಕು. ಪರಿಸರ ದಿನಾಚರಣೆ ಮಾತ್ರ ಸೀಮಿತವಾಗಿರಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ಸಂರಕ್ಷಣೆಯ ದಿನವಾಗಬೇಕು. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ನಮ್ಮ ಜೀವನ ಶೈಲಿ ಮುಂದೊಂದು ದಿನ ನಮಗೆ ಮಾರಕವಾಗಬಹುದು, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ ಬನ್ನಿ. ಮಾಹಿತಿ ಮೂಲ - ಕೃಪೆ : what'sup
Share:

ಭಾರತಕ್ಕೆ ಯುರೋಪಿಯನ್ನರ ಆಗಮನ

ರಷ್ಯಾ ದೇಶದ ಮನೋವಿಜ್ಞಾನಿ ಲೇವಾ ವೈಗೋಟಕ್ಸಿ ಅವರ ಜ್ಞಾನ ಸಂರಚನಾವಾದದ ವಿಚಾರಗಳನ್ನು ಆಧರಿಸಿ 5ಇ ಮಾದರಿಯ ಪಾಠಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂ ಕಲಿಕೆಗೆ ಹಾಗೂ ಕ್ರಿಯಾತ್ಮಕ ಜ್ಞಾನದ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಶಿಕ್ಷಕರಿಗೆ ಸಹಾಯಕವಾಗುತ್ತದೆ. ಮಕ್ಕಳು ತಮ್ಮ ಅನುಭವದ ನೆಲೆಯಲ್ಲಿ ಹೊಸ ಜ್ಞಾನವನ್ನು ಸೃಷ್ಟಿಸಿಕೊಳ್ಳಲು ಹಾಗೂ ಅನ್ವೇಷಿಸಲು ಶಿಕ್ಷಕರು ನೆರವಾಗಬೇಕು. ಶಿಕ್ಷಕರು ದೀರ್ಘ ಉಪನ್ಯಾಸ ನೀಡುವ ಬದಲು ಮಕ್ಕಳ ಕಲಿಕೆಯನ್ನು ಅನುಕೂಲಿಸುವ, ಉತ್ತೇಜಿಸುವ, ಮಾರ್ಗದರ್ಶಿಸುವ ಚಟುವಟಿಕೆಗಳನ್ನು ತರಗತಿಯಲ್ಲಿ ಆಯೋಜಿಸಬೇಕು. ಇದು ಸಂತಸದ ಕಲಿಕೆಗೆ ಹೆಚ್ಚು ಗಮನ ನೀಡುತ್ತದೆ. ಪಾಠವನ್ನು ಯೋಜಿಸುವಾಗ 5ಇ ಹಂತಗಳನ್ನು ಜಾಜೂ ತಪ್ಪದೆ ಅನುಸರಿಸಬೇಕು.

"ಪಾಠಯೋಜನೆ

A ಕಲಿಕಾಂಶಗಳು:

ಭಾರತದ ನಕಾಶೆ

B.ಬೋಧನಾ ಹಂತಗಳು:

ಕಾಯಕ

ಅನುಕೂಲಿಸುವ ವಿಧಾನ ಚಟುವಟಿಕೆಗಳು ಕಲಿಕೋಪಕರಣಗಳು ಮೌಲ್ಯಮಾಪನ
# # # #

ರವೀಂದ್ರ

ಾಹೇರಿ

ಾಹೇರಿ

ಾಹೇರಿ

Share:
Share:

OMR SHEETನಲ್ಲಿ ಉತ್ತರಗಳನ್ನು ಗುರುತು (ಶೇಡ್)‌ ಮಾಡುವದು ಹೇಗೆ ?

Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com