ಗುರಿ ಮೌಂಟ್ ಎವರೆಸ್ಟ್ ಆಗಿರಲಿ.
ಗುರಿ ಎಲ್ಲರಿಗೂ ಇರಲೇಬೇಕಾದದ್ದು ಅತೀ ಅಗತ್ಯ. ಗುರಿ ಇಲ್ಲದ ಜೀವನ ಎಂದೂ ದಡ ಸೇರದು. ಇಂದು ನಾವು ಅಂಗನವಾಡಿಯಲ್ಲಿ ಓದುವ ಮಗುವನ್ನು ನೀನು ಮುಂದೆನಾಗಬೇಕೆಂದಿರುವೆ ಪುಟ್ಟಾ ಅಂತಾ ಕೇಳಿದರೆ ಆ ಮಗು ಕೂಡಾ ಹೇಳುತ್ತೆ, ಡಾಕ್ಟರ್, ಎಂಜಿನಿಯರ್, ಟೀಚರ್, ಡಿ ಸಿ, ಎಸಿ ಮತ್ತೊಂದು ಮಗದೊಂದು. ಹಾಗೆಂದರೇನು ಎಂದು ಖಂಡಿತ ಆ ಮಗುವಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅಂಥದೊಂದು ಗುರಿಯನ್ನು ತಂದೆಯೋ, ತಾಯಿಯೊ ಮತ್ತಾರೋ ಆ ಮಗುವಿನ ಮನಸ್ಸಿನಲ್ಲಿ ಬಿತ್ತಿರುತ್ತಾರೆ ಖಂಡಿತಾ. ಹಾಗಂತ ಎಲ್ಲರೂ ತಾವಂದುಕೊಂಡಂತೆ ಆಗರು( ಹಾಗೊಂದು ವೇಳೆ ಅಂದುಕೊಂಡಂತೆಲ್ಲ ಆಗಿದ್ದರೆ ನಮ್ಮ ಜೀವನಕ್ಕೆ ಥ್ರಿಲ್ ಅನ್ನೋದು ಎಲ್ಲಿರ್ತಿತ್ತು ಅಲ್ವಾ) ಆದರೆ ಖಂಡಿತಾ ಆ ಮಗುವಿನಲ್ಲಿ ಭಾವಿ ಜೀವನದ ಬಗ್ಗೆ ಖಂಡಿತಾ ಒಂದು ಕನಸಿದೆ ಅಂತಾನೇ ಅರ್ಥಾ . ಎಲ್ಲೋ ಓದಿದ ನೆನಪು, ತೇನಸಿಂಗ್ ಶೇರ್ಪಾ ಮೌಂಟ್ ಎವರೆಸ್ಟನ್ನು ಹತ್ತಿ ಮುಗಿಸಿದ ನಂತರ ಅವನನ್ನು ಯಾರೋ ಕೇಳಿದರಂತೆ " ನೀನು ಮೌಂಟ್ ಎವರೆಸ್ಟ್ ಹತ್ತಿ ಬಂದೆಯಲ್ಲಾ ಈಗಾ ನಿನಗೆ ಎನನಿಸುತ್ತಿದೆ" ಎಂದು, ಅದಕ್ಕೆ ತೇನಸಿಂಗ್ ಹೇಳಿದರಂತೆ ನಾನು ಮೌಂಟ್ ಎವರೆಸ್ಟನ್ನು ಈಗಲ್ಲ ಹತ್ತಿದ್ದು ನಾನಿ ಚಿಕ್ಕವನಿರುವಾಗಲೇ ಹತ್ತಿಯಾಗಿದೆ ಎಂದು, ಆ ವ್ಯಕ್ತಿ ಗಾಬರಿಯಿಂದ ಅದ್ಹೇಗೆ ಸಾಧ್ಯ ಎಂದಾಗ ತೇನಸಿಂಗ್ ಹೇಳುತ್ತಾರೆ, " ನಾನು ಚಿಕ್ಕವನಿದ್ದಾಗ ಕುರಿಗಳನ್ನು ಈ ಪರ್ವತದ ಕೆಳಗೆ ಮೇಯಿಸುತ್ತಿದ್ದೆ , ಆಗ ನನಗೆ ಬುತ್ತಿ ತರುತ್ತಿದ್ದ ನನ್ನ ತಾಯಿ ಕೇಳಿದರು ತೇನಸಿಂಗ್ ಆ ಪರ್ವತವನ್ನು ನೀನು ಹತ್ತಿ ನನ್ನ ಆಸೆ ಈಡೇರಿಸುವೆಯಾ ಎಂದು, ಅದೇ ದಿನ ನಾನು ಮಾನಸಿಕವಾಗಿ ಈ ಪರ್ವತವನ್ನು ಹತ್ತಿಯಾಗಿದೆ" ಎಂದು. ನಿಜಾ ಮನುಷ್ಯನಿಗೆ ಕನಸು ಇರಬೇಕು, ಒಂದು ಗುರಿ ಖಂಡಿತ ಇರಬೇಕು ಹಾಗೆಯೇ ಆ ಗುರಿಯನ್ನು ತಲುಪುವ ಛಲ, ಶ್ರದ್ಧೆ , ನಿಷ್ಠೆ ಮತ್ತು ಪ್ರಾಮಾಣಿಕ ಪ್ರಯತ್ನಗಳೂ ಇರಬೇಕು. ಇಂದು ಪ್ರಯತ್ನಗಳು ಕಡಿಮೆಯಾಗುತ್ತಿದ್ದು ಬಹುತೇಕ ಜನರು ಯಶಸ್ಸಿಗಾಗಿ ಶಾರ್ಟ್ ಕಟ್ ಮಾರ್ಗಗಳ ಹುಡುಕಾಟದಲ್ಲಿ ಕಳೆದು ಹೋಗಿದ್ದೀವಿ ಏನೋ ಅನಿಸುತಿದೆ, ನೋಡಿ ಹೆಚ್ಚು ಶ್ರಮ ಬೇಡ ಆದರೆ ಕೈತುಂಬ ಸಂಬಳ ಬೇಕೆಂಬ ಉದ್ಯೋಗಿಗಳು ಒಂದೆಡೆಯಾದರೆ, ಓದಲೊಲ್ಲರು, ಸರಿಯಾಗಿ ಶಾಲೆಗೆ ಬರಲೊಲ್ಲರು ಆದರೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ೮೦%-೯೦% ಅಂಕಗಳು ಬೇಕು, ಇದು ಹೇಗೆ ಸಾಧ್ಯ? ಶ್ರಮವೇ ನಮ್ಮ ಯಶಸ್ಸಿನ ಮಾರ್ಗವಲ್ಲವೇ?
ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ
ಸಹ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ನಾಗರಾಳ. ತಾ|| ಬೀಳಗಿ
ಗುರಿ ಎಲ್ಲರಿಗೂ ಇರಲೇಬೇಕಾದದ್ದು ಅತೀ ಅಗತ್ಯ. ಗುರಿ ಇಲ್ಲದ ಜೀವನ ಎಂದೂ ದಡ ಸೇರದು. ಇಂದು ನಾವು ಅಂಗನವಾಡಿಯಲ್ಲಿ ಓದುವ ಮಗುವನ್ನು ನೀನು ಮುಂದೆನಾಗಬೇಕೆಂದಿರುವೆ ಪುಟ್ಟಾ ಅಂತಾ ಕೇಳಿದರೆ ಆ ಮಗು ಕೂಡಾ ಹೇಳುತ್ತೆ, ಡಾಕ್ಟರ್, ಎಂಜಿನಿಯರ್, ಟೀಚರ್, ಡಿ ಸಿ, ಎಸಿ ಮತ್ತೊಂದು ಮಗದೊಂದು. ಹಾಗೆಂದರೇನು ಎಂದು ಖಂಡಿತ ಆ ಮಗುವಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅಂಥದೊಂದು ಗುರಿಯನ್ನು ತಂದೆಯೋ, ತಾಯಿಯೊ ಮತ್ತಾರೋ ಆ ಮಗುವಿನ ಮನಸ್ಸಿನಲ್ಲಿ ಬಿತ್ತಿರುತ್ತಾರೆ ಖಂಡಿತಾ. ಹಾಗಂತ ಎಲ್ಲರೂ ತಾವಂದುಕೊಂಡಂತೆ ಆಗರು( ಹಾಗೊಂದು ವೇಳೆ ಅಂದುಕೊಂಡಂತೆಲ್ಲ ಆಗಿದ್ದರೆ ನಮ್ಮ ಜೀವನಕ್ಕೆ ಥ್ರಿಲ್ ಅನ್ನೋದು ಎಲ್ಲಿರ್ತಿತ್ತು ಅಲ್ವಾ) ಆದರೆ ಖಂಡಿತಾ ಆ ಮಗುವಿನಲ್ಲಿ ಭಾವಿ ಜೀವನದ ಬಗ್ಗೆ ಖಂಡಿತಾ ಒಂದು ಕನಸಿದೆ ಅಂತಾನೇ ಅರ್ಥಾ . ಎಲ್ಲೋ ಓದಿದ ನೆನಪು, ತೇನಸಿಂಗ್ ಶೇರ್ಪಾ ಮೌಂಟ್ ಎವರೆಸ್ಟನ್ನು ಹತ್ತಿ ಮುಗಿಸಿದ ನಂತರ ಅವನನ್ನು ಯಾರೋ ಕೇಳಿದರಂತೆ " ನೀನು ಮೌಂಟ್ ಎವರೆಸ್ಟ್ ಹತ್ತಿ ಬಂದೆಯಲ್ಲಾ ಈಗಾ ನಿನಗೆ ಎನನಿಸುತ್ತಿದೆ" ಎಂದು, ಅದಕ್ಕೆ ತೇನಸಿಂಗ್ ಹೇಳಿದರಂತೆ ನಾನು ಮೌಂಟ್ ಎವರೆಸ್ಟನ್ನು ಈಗಲ್ಲ ಹತ್ತಿದ್ದು ನಾನಿ ಚಿಕ್ಕವನಿರುವಾಗಲೇ ಹತ್ತಿಯಾಗಿದೆ ಎಂದು, ಆ ವ್ಯಕ್ತಿ ಗಾಬರಿಯಿಂದ ಅದ್ಹೇಗೆ ಸಾಧ್ಯ ಎಂದಾಗ ತೇನಸಿಂಗ್ ಹೇಳುತ್ತಾರೆ, " ನಾನು ಚಿಕ್ಕವನಿದ್ದಾಗ ಕುರಿಗಳನ್ನು ಈ ಪರ್ವತದ ಕೆಳಗೆ ಮೇಯಿಸುತ್ತಿದ್ದೆ , ಆಗ ನನಗೆ ಬುತ್ತಿ ತರುತ್ತಿದ್ದ ನನ್ನ ತಾಯಿ ಕೇಳಿದರು ತೇನಸಿಂಗ್ ಆ ಪರ್ವತವನ್ನು ನೀನು ಹತ್ತಿ ನನ್ನ ಆಸೆ ಈಡೇರಿಸುವೆಯಾ ಎಂದು, ಅದೇ ದಿನ ನಾನು ಮಾನಸಿಕವಾಗಿ ಈ ಪರ್ವತವನ್ನು ಹತ್ತಿಯಾಗಿದೆ" ಎಂದು. ನಿಜಾ ಮನುಷ್ಯನಿಗೆ ಕನಸು ಇರಬೇಕು, ಒಂದು ಗುರಿ ಖಂಡಿತ ಇರಬೇಕು ಹಾಗೆಯೇ ಆ ಗುರಿಯನ್ನು ತಲುಪುವ ಛಲ, ಶ್ರದ್ಧೆ , ನಿಷ್ಠೆ ಮತ್ತು ಪ್ರಾಮಾಣಿಕ ಪ್ರಯತ್ನಗಳೂ ಇರಬೇಕು. ಇಂದು ಪ್ರಯತ್ನಗಳು ಕಡಿಮೆಯಾಗುತ್ತಿದ್ದು ಬಹುತೇಕ ಜನರು ಯಶಸ್ಸಿಗಾಗಿ ಶಾರ್ಟ್ ಕಟ್ ಮಾರ್ಗಗಳ ಹುಡುಕಾಟದಲ್ಲಿ ಕಳೆದು ಹೋಗಿದ್ದೀವಿ ಏನೋ ಅನಿಸುತಿದೆ, ನೋಡಿ ಹೆಚ್ಚು ಶ್ರಮ ಬೇಡ ಆದರೆ ಕೈತುಂಬ ಸಂಬಳ ಬೇಕೆಂಬ ಉದ್ಯೋಗಿಗಳು ಒಂದೆಡೆಯಾದರೆ, ಓದಲೊಲ್ಲರು, ಸರಿಯಾಗಿ ಶಾಲೆಗೆ ಬರಲೊಲ್ಲರು ಆದರೂ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ೮೦%-೯೦% ಅಂಕಗಳು ಬೇಕು, ಇದು ಹೇಗೆ ಸಾಧ್ಯ? ಶ್ರಮವೇ ನಮ್ಮ ಯಶಸ್ಸಿನ ಮಾರ್ಗವಲ್ಲವೇ?
ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ
ಸಹ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ನಾಗರಾಳ. ತಾ|| ಬೀಳಗಿ