"ಸವಿಪಾಠ" YouTube Channel
Subscribe ಆಗಲು ಕ್ಲಿಕ್ ಮಾಡಿ
ಭೋಜರಾಜ
*🌻ದಿನಕ್ಕೊಂದು ಕಥೆ🌻*
ಭೋಜರಾಜನು ಅನುಭಾವಿ. ಆತ ಬಾಲಕನಿದ್ದಾಗ ನಡೆದ ಘಟನೆ. ಭೋಜನು ತಂದೆಗೆ ಒಬ್ಬನೇ ಮಗ. ತೀಕ್ಷಣಮತಿಯೂ ಸ್ಪುರದ್ರೂಪಿಯೂ ಆದ ಭೋಜನ ಮೇಲೆ ತಂದೆಗೆ ಅಪಾರ ಪ್ರೀತಿ. ಮಗನು ರಾಜಗದ್ದುಗೆಯನ್ನು ಏರುವುದನ್ನೇ ಕನಸು ಕಾಣುತ್ತಿದ್ದ . ಆದರೆ ವಿಧಿ ಬಯಸಿದ್ದೇ ಬೇರೆ. ಭೋಜನ ತಂದೆ ಭಯಂಕರ ಕಾಯಿಲೆಯಿಂದ ಮರಣದ ಹಾಸಿಗೆ ಹಿಡಿದ. ಸಕಲ ವೈದ್ಯೋಪಚಾರಗಳು ವಿಫಲಗೊಂಡವು. ಈ ಕಾಯಿಲೆಯಿಂದ ತಾನಿನ್ನು ಉಳಿಯುವುದಿಲ್ಲವೆಂಬ ಅರಿವೂ ಭೋಜನ ತಂದೆಗೆ ಆಯಿತು. ಬೇರೆ ಗತಿಗಾಣದೆ ತನ್ನ ಸತಿ- ಮಹಾರಾಣಿಯ ತಮ್ಮನಾದ ಮುಂಜನನ್ನು ಕರೆದು ಹೇಳಿದ- ''ಭೋಜನು ಇನ್ನೂ ಚಿಕ್ಕ ಬಾಲಕ. ಆತನನ್ನು ಬೆಳೆಸಿ ವಿದ್ಯಾವಂತನೂ, ವೀರನೂ, ರಾಷ್ಟ್ರನಾಯಕನೂ ಆಗುವಂತೆ ಮಾಡಿ ರಾಜಗದ್ದುಗೆಯ ಮೇಲೆ ಕೂಡಿಸುವುದು ನಿನ್ನ ಹೊಣೆ, ಅಲ್ಲಿಯವರೆಗೆ ನೀನೇ ಭೋಜನ ಪರವಾಗಿ ಈ ರಾಜ್ಯವನ್ನಾಳು,''ಎಂದು ಅವನಿಂದ ವಚನ ಪಡೆದು ಕಣ್ಣು ಮುಚ್ಚಿದ. ಜಾಣನಾದ ಮುಂಜನು, ಭೋಜನ ರಕ್ಷ ಕನಾಗಿ ಶಿಕ್ಷ ಕನಾಗಿ ರಾಜ್ಯವನ್ನಾಳತೊಡಗಿದ. ಆದರೆ ರಾಜ್ಯಲಕ್ಷ್ಮಿಯು ಕೈಗೆ ಬರುವುದೇ ತಡ ಮಾವ ಮುಂಜನ ಮನಸ್ಸು ಚಂಚಲಿಸಿತು. ತನ್ನ ಕೈಗೆ ಬಂದ ಈ ರಾಜ್ಯಲಕ್ಷ್ಮಿಯು ಶಾಶ್ವತವಾಗಿ ತನ್ನ ವಂಶಕ್ಕೆ ದಕ್ಕಬೇಕೆಂದು ಬಯಸಿದ. ತನ್ನ ಈ ಬಯಕೆಗೆ ಒಂದೇ ಒಂದು ಅಡ್ಡಿ ಈ ಬಾಲಕ ಭೋಜನೆಂದುಕೊಂಡ. ಈತನನ್ನು ಮುಗಿಸಿದರೆ ಮಾತ್ರ ತನ್ನ ಕನಸು ನನಸಾಗುವುದು ಎಂದು ಭಾವಿಸಿದ. ಅದೇ ಕ್ಷ ಣದಿಂದ ಭೋಜನನ್ನು ಕಂಡಕೂಡಲೇ ಶತ್ರುವನ್ನು ಕಂಡಂತೆ ಭಾವಿಸತೊಡಗಿದ. ತನ್ನದಲ್ಲದ ರಾಜ್ಯವನ್ನು ತನಗೆ ಮಾಡಿಕೊಳ್ಳಲು ಹೊಂಚು ಹಾಕಿದ. ಸೇವಕಧಿರನ್ನು ಕರೆದು ವನವಿಹಾರದ ನೆಪಮಾಡಿಕೊಂಡು ಭೋಜನನ್ನು ಅರಣ್ಯದಲ್ಲಿ ಮುಗಿಸಿ ಬರಲು ಹೇಳಿದ. ನಾಲ್ವರು ಸೇವಕರು ಮುಗ್ಧ ಬಾಲಕ ಭೋಜನನ್ನು ಘೋರಾರಣ್ಯಕ್ಕೆ ಕರೆದೊಯ್ದರು. ಸ್ವಲ್ಪ ಸಮಯ ಸುಂದರ ಸೃಷ್ಟಿಯ ಮಡಿಲಲ್ಲಿ ಬಾಲಕನೊಂದಿಗೆ ಕೂಡಿ ಆಡಿ ನಲಿದರು. ಯುವರಾಜ ಭೋಜನ ನಿಷ್ಕಲ್ಮಷ ನಡೆ ನುಡಿಗಳಿಂದ ನಾಲ್ವರು ಸೇವಕರ ಮನಃಪರಿವರ್ತನಗೊಂಡಿತು. ಬಾಲಕನ ಪ್ರಾಣ ತಗೆಯಲು ಅವರಿಗೆ ಮನಸ್ಸಾಗಲಿಲ್ಲ . ಸತ್ಯ ಸಂಗತಿಯನ್ನು ಬಾಲಕ ಭೋಜನಿಗೆ ತಿಳಿಸಿ ಪಕ್ಕದಲ್ಲಿದ್ದ ಆಶ್ರಮದಲ್ಲಿ ಇರಲು ಹೇಳಿ ನಡೆದರು. ಆಗ ಭೋಜ ನುಡಿದ, ''ಅದೇಕೆ ನೀವು ನಿಮ್ಮ ರಾಜಾಜ್ಞೆಯನ್ನು ಪಾಲಿಸಿರಿ. ನಿಮ್ಮಂಥ ದಯಾಳುಗಳ, ಪ್ರೇಮ ಹೃದಯಿಗಳ ಕೈಯಲ್ಲಿ ಪ್ರಾಣವನ್ನು ಬಿಡುವುದು ಒಂದು ಸೌಭಾಗ್ಯ''! ಬಾಲಕನ ನಿರ್ಭಿತ ನುಡಿಗಳನ್ನು ಕೇಳಿ ಸೇವಕರಿಗೆ ಪರಮಾಶ್ಚರ್ಯ ! ನಾಳೆ ಸಮರ್ಥ ರಾಷ್ಟ್ರನಾಯಕರಾಗಲಿರುವ ಧೀಮಂತರಾದ ತಮ್ಮ ಪ್ರಾಣಕ್ಕೆ ಧಕ್ಕೆ ತರುವ ಕಾರ್ಯ ನಮ್ಮಿಂದಾಗದು !' ಎಂದು ನಾಲ್ವರೂ ಯುವರಾಜ ಭೋಜನ ಕಾಲಿಗೆ ಎರಗಿದರು. ಕಟುಕರಿಗೆ ಬಂದ ಈ ಕಾರುಣ್ಯ ಭೋಜನ ಸೋದರ- ಮಾವನಾದ ಮುಂಜನಿಗೆ ಬಾರದಿರುವುದು ಎಂಥ ವಿಪರ್ಯಾಸ ! 'ಆಗಲಿ ನನ್ನದೊಂದು ಮಾತಿದೆ ಅದನ್ನು ನನ್ನ ಮಾವ ಮುಂಜನಿಗೆ ತಲುಪಿಸಿರಿ' ಎಂದು ಭೋಜನು ತಾಳೆಗರಿಯಲ್ಲಿ ಈ ಕೆಳಗಿನಂತೆ ಬರೆದುಕೊಟ್ಟ. ಕೃತಯುಗಾಲಂಕಾರ ಪ್ರಾಯನಾದ ಮಾಂಧಾತಾ ಮಹಾರಾಜ ಹೋದ. ತ್ರೇತಾಯುಗದಲ್ಲಿ ಮಹಾಸಾಗರಕ್ಕೆ ಸೇತುವೆ ನಿರ್ಮಿಸಿ ರಾವಣನನ್ನು ಜಯಿಸಿದ ಆ ಮಹಾನುಭಾವ ರಾಮನೆಲ್ಲಿ ? ದ್ವಾಪರ ಯುಗದಲ್ಲಿ ಮಹಿಯನ್ನಾಳಿದ ಧರ್ಮ ಮುಂತಾದ ರಾಜರು ಸ್ವರ್ಗಕ್ಕೆ ಹೋಗಿಯೇ ಬಿಟ್ಟರು ! ಕಲಿಯುಗದಲ್ಲಿ ಆಳುತ್ತಿರುವ ಮುಂಜನೆ, ನೀನು ಮಾತ್ರ ಅವರಂತೆ ಈ ಭೂಮಂಡಲವನ್ನು ಇಲ್ಲಿಯೇ ಬಿಟ್ಟು ಹೋಗಲಾರೆ ಅಲ್ಲವೇ ? ಈ ಅಮರ ನುಡಿಗಡಣದ ಆ ಹಸಿರೆಲೆಯನ್ನು ಸೇವಕರು ಮುಂಜರಾಜನ ಕೈಗಿತ್ತರು. ಇದು ಭೋಜನ ಅಂತಿಮ ಪತ್ರವಿರಬಹುದು ಎಂದು ಮುಂಜನು ಅದನ್ನು ಓದಿದ. ತಕ್ಷ ಣ ಆತನಲ್ಲಿದ್ದ ಅಜ್ಞಾನಜನಿತ ಭಯದ ಕತ್ತಲೆ ಹರಿದುಹೋಗಿತ್ತು. ಅರುವಿನ ಕಣ್ಣು ತೆರೆದು ನಿಂದಿತ್ತು. ಅಭಯಾನಂದದ ಪ್ರಭೆಯು ಅವನ ಸುತ್ತ ಚಲ್ಲುವರೆದಿತ್ತು ! ತತ್ಪರಿಣಾಮವಾಗಿ ಮುಂಜನು ಯುವರಾಜ ಭೋಜನನ್ನು ಕರೆತಂದು ರಾಜಗದ್ದುಗೆಯ ಮೇಲೆ ಕುಳ್ಳಿರಿಸಿದ !
ಆಧಾರ : ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸಂಗ್ರಹ: ವೀರೇಶ್ ಅರಸಿಕೆರೆ.
ಭೋಜರಾಜನು ಅನುಭಾವಿ. ಆತ ಬಾಲಕನಿದ್ದಾಗ ನಡೆದ ಘಟನೆ. ಭೋಜನು ತಂದೆಗೆ ಒಬ್ಬನೇ ಮಗ. ತೀಕ್ಷಣಮತಿಯೂ ಸ್ಪುರದ್ರೂಪಿಯೂ ಆದ ಭೋಜನ ಮೇಲೆ ತಂದೆಗೆ ಅಪಾರ ಪ್ರೀತಿ. ಮಗನು ರಾಜಗದ್ದುಗೆಯನ್ನು ಏರುವುದನ್ನೇ ಕನಸು ಕಾಣುತ್ತಿದ್ದ . ಆದರೆ ವಿಧಿ ಬಯಸಿದ್ದೇ ಬೇರೆ. ಭೋಜನ ತಂದೆ ಭಯಂಕರ ಕಾಯಿಲೆಯಿಂದ ಮರಣದ ಹಾಸಿಗೆ ಹಿಡಿದ. ಸಕಲ ವೈದ್ಯೋಪಚಾರಗಳು ವಿಫಲಗೊಂಡವು. ಈ ಕಾಯಿಲೆಯಿಂದ ತಾನಿನ್ನು ಉಳಿಯುವುದಿಲ್ಲವೆಂಬ ಅರಿವೂ ಭೋಜನ ತಂದೆಗೆ ಆಯಿತು. ಬೇರೆ ಗತಿಗಾಣದೆ ತನ್ನ ಸತಿ- ಮಹಾರಾಣಿಯ ತಮ್ಮನಾದ ಮುಂಜನನ್ನು ಕರೆದು ಹೇಳಿದ- ''ಭೋಜನು ಇನ್ನೂ ಚಿಕ್ಕ ಬಾಲಕ. ಆತನನ್ನು ಬೆಳೆಸಿ ವಿದ್ಯಾವಂತನೂ, ವೀರನೂ, ರಾಷ್ಟ್ರನಾಯಕನೂ ಆಗುವಂತೆ ಮಾಡಿ ರಾಜಗದ್ದುಗೆಯ ಮೇಲೆ ಕೂಡಿಸುವುದು ನಿನ್ನ ಹೊಣೆ, ಅಲ್ಲಿಯವರೆಗೆ ನೀನೇ ಭೋಜನ ಪರವಾಗಿ ಈ ರಾಜ್ಯವನ್ನಾಳು,''ಎಂದು ಅವನಿಂದ ವಚನ ಪಡೆದು ಕಣ್ಣು ಮುಚ್ಚಿದ. ಜಾಣನಾದ ಮುಂಜನು, ಭೋಜನ ರಕ್ಷ ಕನಾಗಿ ಶಿಕ್ಷ ಕನಾಗಿ ರಾಜ್ಯವನ್ನಾಳತೊಡಗಿದ. ಆದರೆ ರಾಜ್ಯಲಕ್ಷ್ಮಿಯು ಕೈಗೆ ಬರುವುದೇ ತಡ ಮಾವ ಮುಂಜನ ಮನಸ್ಸು ಚಂಚಲಿಸಿತು. ತನ್ನ ಕೈಗೆ ಬಂದ ಈ ರಾಜ್ಯಲಕ್ಷ್ಮಿಯು ಶಾಶ್ವತವಾಗಿ ತನ್ನ ವಂಶಕ್ಕೆ ದಕ್ಕಬೇಕೆಂದು ಬಯಸಿದ. ತನ್ನ ಈ ಬಯಕೆಗೆ ಒಂದೇ ಒಂದು ಅಡ್ಡಿ ಈ ಬಾಲಕ ಭೋಜನೆಂದುಕೊಂಡ. ಈತನನ್ನು ಮುಗಿಸಿದರೆ ಮಾತ್ರ ತನ್ನ ಕನಸು ನನಸಾಗುವುದು ಎಂದು ಭಾವಿಸಿದ. ಅದೇ ಕ್ಷ ಣದಿಂದ ಭೋಜನನ್ನು ಕಂಡಕೂಡಲೇ ಶತ್ರುವನ್ನು ಕಂಡಂತೆ ಭಾವಿಸತೊಡಗಿದ. ತನ್ನದಲ್ಲದ ರಾಜ್ಯವನ್ನು ತನಗೆ ಮಾಡಿಕೊಳ್ಳಲು ಹೊಂಚು ಹಾಕಿದ. ಸೇವಕಧಿರನ್ನು ಕರೆದು ವನವಿಹಾರದ ನೆಪಮಾಡಿಕೊಂಡು ಭೋಜನನ್ನು ಅರಣ್ಯದಲ್ಲಿ ಮುಗಿಸಿ ಬರಲು ಹೇಳಿದ. ನಾಲ್ವರು ಸೇವಕರು ಮುಗ್ಧ ಬಾಲಕ ಭೋಜನನ್ನು ಘೋರಾರಣ್ಯಕ್ಕೆ ಕರೆದೊಯ್ದರು. ಸ್ವಲ್ಪ ಸಮಯ ಸುಂದರ ಸೃಷ್ಟಿಯ ಮಡಿಲಲ್ಲಿ ಬಾಲಕನೊಂದಿಗೆ ಕೂಡಿ ಆಡಿ ನಲಿದರು. ಯುವರಾಜ ಭೋಜನ ನಿಷ್ಕಲ್ಮಷ ನಡೆ ನುಡಿಗಳಿಂದ ನಾಲ್ವರು ಸೇವಕರ ಮನಃಪರಿವರ್ತನಗೊಂಡಿತು. ಬಾಲಕನ ಪ್ರಾಣ ತಗೆಯಲು ಅವರಿಗೆ ಮನಸ್ಸಾಗಲಿಲ್ಲ . ಸತ್ಯ ಸಂಗತಿಯನ್ನು ಬಾಲಕ ಭೋಜನಿಗೆ ತಿಳಿಸಿ ಪಕ್ಕದಲ್ಲಿದ್ದ ಆಶ್ರಮದಲ್ಲಿ ಇರಲು ಹೇಳಿ ನಡೆದರು. ಆಗ ಭೋಜ ನುಡಿದ, ''ಅದೇಕೆ ನೀವು ನಿಮ್ಮ ರಾಜಾಜ್ಞೆಯನ್ನು ಪಾಲಿಸಿರಿ. ನಿಮ್ಮಂಥ ದಯಾಳುಗಳ, ಪ್ರೇಮ ಹೃದಯಿಗಳ ಕೈಯಲ್ಲಿ ಪ್ರಾಣವನ್ನು ಬಿಡುವುದು ಒಂದು ಸೌಭಾಗ್ಯ''! ಬಾಲಕನ ನಿರ್ಭಿತ ನುಡಿಗಳನ್ನು ಕೇಳಿ ಸೇವಕರಿಗೆ ಪರಮಾಶ್ಚರ್ಯ ! ನಾಳೆ ಸಮರ್ಥ ರಾಷ್ಟ್ರನಾಯಕರಾಗಲಿರುವ ಧೀಮಂತರಾದ ತಮ್ಮ ಪ್ರಾಣಕ್ಕೆ ಧಕ್ಕೆ ತರುವ ಕಾರ್ಯ ನಮ್ಮಿಂದಾಗದು !' ಎಂದು ನಾಲ್ವರೂ ಯುವರಾಜ ಭೋಜನ ಕಾಲಿಗೆ ಎರಗಿದರು. ಕಟುಕರಿಗೆ ಬಂದ ಈ ಕಾರುಣ್ಯ ಭೋಜನ ಸೋದರ- ಮಾವನಾದ ಮುಂಜನಿಗೆ ಬಾರದಿರುವುದು ಎಂಥ ವಿಪರ್ಯಾಸ ! 'ಆಗಲಿ ನನ್ನದೊಂದು ಮಾತಿದೆ ಅದನ್ನು ನನ್ನ ಮಾವ ಮುಂಜನಿಗೆ ತಲುಪಿಸಿರಿ' ಎಂದು ಭೋಜನು ತಾಳೆಗರಿಯಲ್ಲಿ ಈ ಕೆಳಗಿನಂತೆ ಬರೆದುಕೊಟ್ಟ. ಕೃತಯುಗಾಲಂಕಾರ ಪ್ರಾಯನಾದ ಮಾಂಧಾತಾ ಮಹಾರಾಜ ಹೋದ. ತ್ರೇತಾಯುಗದಲ್ಲಿ ಮಹಾಸಾಗರಕ್ಕೆ ಸೇತುವೆ ನಿರ್ಮಿಸಿ ರಾವಣನನ್ನು ಜಯಿಸಿದ ಆ ಮಹಾನುಭಾವ ರಾಮನೆಲ್ಲಿ ? ದ್ವಾಪರ ಯುಗದಲ್ಲಿ ಮಹಿಯನ್ನಾಳಿದ ಧರ್ಮ ಮುಂತಾದ ರಾಜರು ಸ್ವರ್ಗಕ್ಕೆ ಹೋಗಿಯೇ ಬಿಟ್ಟರು ! ಕಲಿಯುಗದಲ್ಲಿ ಆಳುತ್ತಿರುವ ಮುಂಜನೆ, ನೀನು ಮಾತ್ರ ಅವರಂತೆ ಈ ಭೂಮಂಡಲವನ್ನು ಇಲ್ಲಿಯೇ ಬಿಟ್ಟು ಹೋಗಲಾರೆ ಅಲ್ಲವೇ ? ಈ ಅಮರ ನುಡಿಗಡಣದ ಆ ಹಸಿರೆಲೆಯನ್ನು ಸೇವಕರು ಮುಂಜರಾಜನ ಕೈಗಿತ್ತರು. ಇದು ಭೋಜನ ಅಂತಿಮ ಪತ್ರವಿರಬಹುದು ಎಂದು ಮುಂಜನು ಅದನ್ನು ಓದಿದ. ತಕ್ಷ ಣ ಆತನಲ್ಲಿದ್ದ ಅಜ್ಞಾನಜನಿತ ಭಯದ ಕತ್ತಲೆ ಹರಿದುಹೋಗಿತ್ತು. ಅರುವಿನ ಕಣ್ಣು ತೆರೆದು ನಿಂದಿತ್ತು. ಅಭಯಾನಂದದ ಪ್ರಭೆಯು ಅವನ ಸುತ್ತ ಚಲ್ಲುವರೆದಿತ್ತು ! ತತ್ಪರಿಣಾಮವಾಗಿ ಮುಂಜನು ಯುವರಾಜ ಭೋಜನನ್ನು ಕರೆತಂದು ರಾಜಗದ್ದುಗೆಯ ಮೇಲೆ ಕುಳ್ಳಿರಿಸಿದ !
ಆಧಾರ : ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸಂಗ್ರಹ: ವೀರೇಶ್ ಅರಸಿಕೆರೆ.
ವಿಶ್ವ ಮಹಿಳಾ ದಿನಾಚರಣೆ
ವಿಶ್ವ ಮಹಿಳಾ ದಿನಾಚರಣೆ
ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳೂ ಅವಳೇ. ಇಂತಹ ಮಹಿಳೆಗೆ ಜಗತ್ತಿನಲ್ಲಿ ಮಹಿಳೆಗೆ ಅಪೂರ್ವ ಸ್ಥಾನವಿದೆ. ಇದನ್ನು ನೆನೆಸಿಕೊಡುವಂತೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಮಹಿಳಾ ದಿನದ ನಿಟ್ಟಿನಲ್ಲಿ ಭಾರತದ "ಮೊದಲಿಗ' ಮಹಿಳೆಯರ ಬಗ್ಗೆ, ಮಹಿಳೆ ಆಧಾರಿತ ಚಿತ್ರಗಳು, ಸ್ಫೂರ್ತಿದಾಯಕ ಮಾತುಗಳ ಗೊಂಚಲುಗಳು ಇಲ್ಲಿವೆ.
ಭಾರತದ ಮೊದಲಿಗ ಮಹಿಳೆಯರು:
ಮದರ್ ತೆರೇಸಾ
ಸಮಾಜ ಸೇವೆಗೆ ಮತ್ತೂಂದು ಹೆಸರು. ದೀನರು, ಬಡ ಮಕ್ಕಳು, ರೋಗಿಗಳ ಆರೈಕೆಯಲ್ಲಿ ವಿಶ್ವಕ್ಕೇ ಹೆಸರಾದವರು. ದೇಶದಲ್ಲಿ ಹಲವು ಮಿಷನರಿಗಳ ಮೂಲಕ ಸಮಾಜ ಸೇವಾ ಕೈಂಕರ್ಯವನ್ನು ನಡೆಸಿದರು. ಅವರ ನಿಧನಾ ನಂತರವೂ ತೆರೇಸಾ ಹೆಸರಲ್ಲಿ ಈ ಕೆಲಸಗಳು ಮುಂದುವರಿಯುತ್ತಿವೆ.
ಇಂದಿರಾ ಗಾಂಧಿ
ದೇಶದ ಮೊದಲ ಮಹಿಳಾ ಪ್ರಧಾನಿ. ಅತಿ ಪ್ರಭಾವಿಯೂ ಹೌದು. ಸುಮಾರು 20 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದವರು. ಬಾಂಗ್ಲಾ ವಿಮೋಚನೆಯಲ್ಲಿ ದಿಟ್ಟತನ ಪ್ರದರ್ಶಿಸಿದವರು. ಧೈರ್ಯ, ಛಲಕ್ಕೆ ಇಂದಿರಾ ಹೆಸರಾಗಿದ್ದಾರೆ. ಬಿಬಿಸಿಯ ಶತಮಾನದ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದರು.
ಕಿರಣ್ ಬೇಡಿ
ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ದೇಶದ ಹಲವಾರು ಮಹಿಳಾ ಅಧಿಕಾರಿಗಳಿಗೆ ಸ್ಫೂರ್ತಿಯಾದವರು. ತಿಹಾರ್ ಜೈಲಿನ ಜೈಲಧಿಕಾರಿಯಾಗಿ ಹಲವು ಬದಲಾವಣೆಗೆ ಕಾರಣವಾದವರು. ದಿಟ್ಟ ಪೊಲೀಸ್ ಅಧಿಕಾರಿ ಎಂದೇ ಪ್ರಸಿದ್ಧರಾದ ಬೇಡಿ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಭಾಗಿಯಾಗಿದ್ದರು.
ಪ್ರತಿಭಾ ಪಾಟೀಲ್
ದೇಶದ 12ನೇ ರಾಷ್ಟ್ರಪತಿಯಾಗಿ 2007ರಿಂದ 2012ರವರೆಗೆ ಹುದ್ದೆಯಲ್ಲಿದ್ದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತ ವೇಳೆ ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದರು. ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರಿಂದ 2007ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿಯೂ ಇದ್ದರು.
ಮೇರಿ ಕೋಮ್
ಅಪ್ರತಿಮ ಬಾಕ್ಸರ್. ಓರ್ವ ತಾಯಿಯಾಗಿ ಐದು ಬಾರಿ ವಿಶ್ವ ಅಮೆಚೂÂರ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಪದಕ ಮುಡಿಗೇರಿಸಿಕೊಂಡವರು. 2012 ಲಂಡನ್ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟವರು. ದೇಶದ ಮಹಿಳಾ ಕ್ರೀಡಾಪಟುಗಳಿಗೆ ಮಣಿಪುರದ ಮೇರಿ ಕೋಮ್ ಸ್ಫೂರ್ತಿಯಾಗಿದ್ದಾರೆ.
ನ್ಯಾ.ಫಾತಿಮಾ ಬೀವಿ
ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ. ಅಲ್ಪಸಂಖ್ಯಾತ ಸಮುದಾಯದಿಂದ ಅತ್ಯುನ್ನತ ಹುದ್ದೆಗೇರಿದ ಮೊದಲ ಮಹಿಳೆಯೂ ಹೌದು. 1989ರಲ್ಲಿ ಅವರು ಸುಪ್ರೀಂ ಕೋರ್ಟ್ಗೆ ನೇಮಕವಾಗಿದ್ದರು. 1984ರಿಂದ 1980ರವರೆಗೆ ಕೇರಳ ಹೈಕೋರ್ಟ್ ನ್ಯಾಯಾಧೀಶೆಯಾಗಿಯೂ ಸೇವೆ ಸಲ್ಲಿಸಿದ್ದರು.
ಮೇ.ಪ್ರಿಯಾ ಝಿಂಗಮ್
ಭಾರತೀಯ ಭೂ ಸೇನೆಯಲ್ಲಿ ಮೊದಲ ಮಹಿಳಾ ಅಧಿಕಾರಿ. 1992ರಲ್ಲಿ ಮಹಿಳೆಯರನ್ನೂ ಸೇನೆಗೆ ಸೇರಿ ಇಕೊಳ್ಳುವಂತೆ ಅವರು ಸೇನಾಮುಖ್ಯಸ್ಥರಿಗೆ ಪತ್ರ ಬರೆದು ಪ್ರಸಿದ್ಧವಾಗಿದ್ದರು. ಬಳಿಕ 24 ಮಹಿಳೆಯರನ್ನು ನಿಯೋಜಿಸಲಾಗಿತ್ತು. ಮೇಜರ್ ಹುದ್ದೆಯಲ್ಲಿ ಪ್ರಿಯಾ ಅವರು ಸೇವೆ ಸಲ್ಲಿಸಿದ್ದರು.
ಕಲ್ಪನಾ ಚಾವ್ಲಾ
ಭಾರತ ಮೂಲದ ಮೊದಲ ಮಹಿಳಾ ಗಗನಯಾತ್ರಿ. 1997ರಲ್ಲಿ ಮೊದಲ ಬಾರಿಗೆ ಕಲ್ಪನಾ ಚಾವ್ಲಾ ಅವರು ನಾಸಾದ ಮೂಲಕ ಗಗನಯಾತ್ರೆ ಕೈಗೊಂಡಿದ್ದರು. ರೊಬೊಟಿಕ್ ಆರ್ಮ್ ಆಪರೇಟರ್ ಆಗಿ ಅವರು ಕರ್ತವ್ಯ ನಿರ್ವಹಿಸಿದ್ದರು. 2003ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಮರಳುತ್ತಿರುವ ವೇಳೆ ಸಂಭವಿಸಿದ ದುರಂತದಲ್ಲಿ ಅವರು ಮಡಿದಿದ್ದರು.ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳೂ ಅವಳೇ. ಇಂತಹ ಮಹಿಳೆಗೆ ಜಗತ್ತಿನಲ್ಲಿ ಮಹಿಳೆಗೆ ಅಪೂರ್ವ ಸ್ಥಾನವಿದೆ. ಇದನ್ನು ನೆನೆಸಿಕೊಡುವಂತೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಮಹಿಳಾ ದಿನದ ನಿಟ್ಟಿನಲ್ಲಿ ಭಾರತದ "ಮೊದಲಿಗ' ಮಹಿಳೆಯರ ಬಗ್ಗೆ, ಮಹಿಳೆ ಆಧಾರಿತ ಚಿತ್ರಗಳು, ಸ್ಫೂರ್ತಿದಾಯಕ ಮಾತುಗಳ ಗೊಂಚಲುಗಳು ಇಲ್ಲಿವೆ.
ಭಾರತದ ಮೊದಲಿಗ ಮಹಿಳೆಯರು:
ಮದರ್ ತೆರೇಸಾ
ಸಮಾಜ ಸೇವೆಗೆ ಮತ್ತೂಂದು ಹೆಸರು. ದೀನರು, ಬಡ ಮಕ್ಕಳು, ರೋಗಿಗಳ ಆರೈಕೆಯಲ್ಲಿ ವಿಶ್ವಕ್ಕೇ ಹೆಸರಾದವರು. ದೇಶದಲ್ಲಿ ಹಲವು ಮಿಷನರಿಗಳ ಮೂಲಕ ಸಮಾಜ ಸೇವಾ ಕೈಂಕರ್ಯವನ್ನು ನಡೆಸಿದರು. ಅವರ ನಿಧನಾ ನಂತರವೂ ತೆರೇಸಾ ಹೆಸರಲ್ಲಿ ಈ ಕೆಲಸಗಳು ಮುಂದುವರಿಯುತ್ತಿವೆ.
ಇಂದಿರಾ ಗಾಂಧಿ
ದೇಶದ ಮೊದಲ ಮಹಿಳಾ ಪ್ರಧಾನಿ. ಅತಿ ಪ್ರಭಾವಿಯೂ ಹೌದು. ಸುಮಾರು 20 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದವರು. ಬಾಂಗ್ಲಾ ವಿಮೋಚನೆಯಲ್ಲಿ ದಿಟ್ಟತನ ಪ್ರದರ್ಶಿಸಿದವರು. ಧೈರ್ಯ, ಛಲಕ್ಕೆ ಇಂದಿರಾ ಹೆಸರಾಗಿದ್ದಾರೆ. ಬಿಬಿಸಿಯ ಶತಮಾನದ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದರು.
ಕಿರಣ್ ಬೇಡಿ
ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ದೇಶದ ಹಲವಾರು ಮಹಿಳಾ ಅಧಿಕಾರಿಗಳಿಗೆ ಸ್ಫೂರ್ತಿಯಾದವರು. ತಿಹಾರ್ ಜೈಲಿನ ಜೈಲಧಿಕಾರಿಯಾಗಿ ಹಲವು ಬದಲಾವಣೆಗೆ ಕಾರಣವಾದವರು. ದಿಟ್ಟ ಪೊಲೀಸ್ ಅಧಿಕಾರಿ ಎಂದೇ ಪ್ರಸಿದ್ಧರಾದ ಬೇಡಿ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಭಾಗಿಯಾಗಿದ್ದರು.
ಪ್ರತಿಭಾ ಪಾಟೀಲ್
ದೇಶದ 12ನೇ ರಾಷ್ಟ್ರಪತಿಯಾಗಿ 2007ರಿಂದ 2012ರವರೆಗೆ ಹುದ್ದೆಯಲ್ಲಿದ್ದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತ ವೇಳೆ ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದರು. ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರಿಂದ 2007ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿಯೂ ಇದ್ದರು.
ಮೇರಿ ಕೋಮ್
ಅಪ್ರತಿಮ ಬಾಕ್ಸರ್. ಓರ್ವ ತಾಯಿಯಾಗಿ ಐದು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ ಶಿಪ್ನಲ್ಲಿ ಪದಕ ಮುಡಿಗೇರಿಸಿಕೊಂಡವರು. 2012 ಲಂಡನ್ ಒಲಿಂಪಿಕ್ಸ್ನಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟವರು. ದೇಶದ ಮಹಿಳಾ ಕ್ರೀಡಾಪಟುಗಳಿಗೆ ಮಣಿಪುರದ ಮೇರಿ ಕೋಮ್ ಸ್ಫೂರ್ತಿಯಾಗಿದ್ದಾರೆ.
ಕೃಪೆ: ಉದಯವಾಣಿ