For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ವಯಸ್ಸಿಗೆ ನಾಚಿಕೆ ಇದೆ! ಹಸಿವಿಗೆ ನಾಚಿಕೆ ಇಲ್ಲ

                                                                      ವಯಸ್ಸಿಗೆ ನಾಚಿಕೆ ಇದೆ! ಹಸಿವಿಗೆ ನಾಚಿಕೆ ಇಲ್ಲ !*

ಹೃದಯಸ್ಪರ್ಶಿ ಘಟನೆಯೊಂದು ಇಲ್ಲಿದೆ. ಡಿಸೆಂಬರ್‌ನ ಒಂದು ಮುಂಜಾನೆ. ನಾಲ್ಕೈದು ಹಿರಿಯರು ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಒಬ್ಬ ವೃದ್ಧರು ಬಂದರು. ಅವರು ತೊಟ್ಟಿದ್ದ ಬಟ್ಟೆ ಯಾವುದೋ ಕಾಲದಲ್ಲಿ ಹೊಸದಾಗಿದ್ದಿರಬಹುದು. ಆದರೆ ಈಗ ಜೀರ್ಣಾವಸ್ಥೆಯಲ್ಲಿತ್ತು. ಅವರು ಹಿರಿಯರನ್ನು ಕುರಿತು ‘ಸ್ವಾಮಿ, ನಾನೊಂದು ಅನಾಥಾಲಯದ ಪರವಾಗಿ ಬಂದಿದ್ದೇನೆ. ಅನಾಥಾಲಯದಲ್ಲಿ ತಾಯ್ತಂದೆಯರಿಲ್ಲದ ಸುಮಾರು ಐವತ್ತು ಬಡ ಮಕ್ಕಳಿಗೆ ಉಚಿತ ಊಟ-ವಸತಿಯ ವ್ಯವಸ್ಥೆಯಿದೆ. ನಿಮ್ಮಂಥ ಸಜ್ಜನರು ಕೊಡುವ ದೇಣಿಗೆಗಳಿಂದಾಗಿ ಮಕ್ಕಳ ಊಟ-ತಿಂಡಿಗಳು ನಡೆಯುತ್ತವೆ. ಇನ್ನೇನು ಕ್ರಿಸ್ಮಸ್ ಬರುವುದರಲ್ಲಿದೆ.

ಅನುಕೂಲಸ್ಥರಾದ ನೀವೆಲ್ಲ ದೊಡ್ಡ ಮನಸ್ಸು ಮಾಡಿ ಒಂದಷ್ಟು ಹಣ ಕೊಟ್ಟರೆ ಬಡಮಕ್ಕಳಿಗೆ ಕೇಕ್ ಹಂಚುತ್ತೇವೆ. ನಿಮಗೆ ಬಿಡುವಿದ್ದರೆ ನೀವೇ ಅಂದು ಬಂದು ಮಕ್ಕಳಿಗೆ ಕೇಕ್ ಹಂಚಬಹುದು. ಅವರೊಂದಿಗೆ ಒಂದಷ್ಟು ಕಾಲ ಕಳೆಯಬಹುದು. ಮಕ್ಕಳೂ ನಿಮ್ಮ ಉಪಕಾರವನ್ನು ಸ್ಮರಿಸುತ್ತಾರೆ’ ಎಂದು ಹೇಳಿದರು. ಹಿರಿಯರೆಲ್ಲಾ ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. ಐನೂರು ರುಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ವೃದ್ಧರು ತಕ್ಷಣ ಹಣಕ್ಕೆ ರಸೀದಿ ಬರೆದು ಕೊಟ್ಟು, ಧನ್ಯವಾದ ಸಲ್ಲಿಸಿ, ಕ್ರಿಸ್ಮಸ್ ಹಬ್ಬದಂದು ಬರಬೇಕೆಂದು ಆಹ್ವಾನಿಸಿ ಹೊರಟರು.

ಕ್ರಿಸ್ಮಸ್ ಹಬ್ಬದ ದಿನ ಬಂದಿತು. ಆ ಹಿರಿಯರೆಲ್ಲಾ ಒಟ್ಟಾಗಿ ರಸೀತಿಯಲ್ಲಿದ್ದ ವಿಳಾಸವನ್ನು ಹುಡುಕಿಕೊಂಡು ಅನಾಥಾಲಯಕ್ಕೆ ಹೋದರು. ಆ ವಿಳಾಸದಲ್ಲಿ ಮನೆಯಿತ್ತು! ಅನಾಥಾಲಯ ಇರಲಿಲ್ಲ! ಆ ಮನೆಯವರು ‘ಸ್ವಾಮಿ, ಯಾರೋ ಮುದುಕಪ್ಪ ನಿಮ್ಮೆಲ್ಲರಿಗೂ ಟೋಪಿ ಹಾಕಿದ್ದಾನೆ. ಹೀಗೆ ಅನಾಥಾಲಯಕ್ಕೆ ದೇಣಿಗೆ ಕೊಟ್ಟು, ಅದನ್ನು ಹುಡುಕಿಕೊಂಡು ಬಂದವರಲ್ಲಿ ನೀವೇ ಮೊದಲನೆಯವರಲ್ಲ. ಬಹಳಷ್ಟು ಜನ ಬಂದು ಹೋಗಿದ್ದಾರೆ. ಆ ಪಾಪಿ ಮುದುಕನಿಗೆ ನಮ್ಮ ಮನೆಯ ವಿಳಾಸ ಹೇಗೆ ಸಿಕ್ಕಿತೋ ಗೊತ್ತಿಲ್ಲ’ ಎಂದುಬಿಟ್ಟರು.

ಹಿರಿಯರೆಲ್ಲಾ ತಾವು ಮೋಸ ಹೋದೆವು ಎಂದುಕೊಳ್ಳುತ್ತಾ ಹಿಂತಿರುಗಿದರು. ಇದಾದ ಮೂರ್ನಾಲ್ಕು ತಿಂಗಳ ನಂತರ ಪಾರ್ಕಿನ ಹಿರಿಯರಲ್ಲೊಬ್ಬರಿಗೆ ಗಾಂಧಿಬಜಾರಿನಲ್ಲಿ ಅದೇ ವೃದ್ಧರು ಕಂಡರು. ಹಿರಿಯರು ಅವರನ್ನು ಗುರುತಿಸಿದರು. ಅವರಿಗೆ ಇವರ ಗುರುತಾಗಲಿಲ್ಲ! ವೃದ್ಧರ ಕೈಯಲ್ಲಿ ಅದೇ ರಸೀದಿ ಪುಸ್ತಕವಿತ್ತು. ಅವರೀಗ ಅನಾಥಾಲಯದ ಮಕ್ಕಳಿಗೆ ಯುಗಾದಿ ಹಬ್ಬಕ್ಕೆ ಒಬ್ಬಟ್ಟಿನ ಊಟ ಹಾಕಿಸಿ ಎಂದು ಹೇಳುತ್ತಾ ಹಣ ಸಂಗ್ರಹಿಸುತ್ತಿದ್ದರು. ಹಿರಿಯರು ‘ಹೀಗೆಲ್ಲ ಸುಳ್ಳು ಹೇಳಿ ಹೊಟ್ಟೆ ಹೊರೆಯುತ್ತೀರಲ್ಲಾ? ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮನ್ನು ಪೋಲೀಸರಿಗೆ ಒಪ್ಪಿಸಿ, ಸೆರೆಮನೆಗೆ ಕಳುಹಿಸುತ್ತೇನೆ’ ಎಂದು ಗದರಿಸಿದರು.

ಆ ವೃದ್ಧರು ‘ಸರ್, ನೀವು ನನ್ನನ್ನು ಬಯ್ಯುವುದರಲ್ಲಿ, ಬೆದರಿಸುವುದರಲ್ಲಿ ಏನೂ ತಪ್ಪಿಲ್ಲ. ಆದರೆ ನನ್ನೆರಡು ಮಾತುಗಳನ್ನು ಕೇಳಿ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದೆ. ನನಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ನಾನು ನನ್ನ ಹೆಂಡತಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದೆವು. ಓದಿಸಿದೆವು.  ಈಗೆಲ್ಲ ಅವರು ಬೆಳೆದು ದೊಡ್ಡವರಾಗಿದ್ದಾರೆ. ಉದ್ಯೋಗಗಳಲ್ಲಿದ್ದಾರೆ. ನಮ್ಮಿಂದ ದೂರವಾಗಿ ಬೇರೆಯಾಗಿ ಬದುಕುತ್ತಿದ್ದಾರೆ. ನಾನು ನನ್ನ ಮುದಿ ಹೆಂಡತಿ ಇಬ್ಬರೇ ಉಳಿದುಕೊಂಡಿದ್ದೇವೆ. ನನಗೀಗ ಯಾವ ಸಂಪಾದನೆಯೂ ಇಲ್ಲ. ಭಿಕ್ಷೆ ಬೇಡಲು ಹೋದರೆ ಈ ವಯಸ್ಸಿನಲ್ಲಿ ಭಿಕ್ಷೆ ಬೇಡಲು ನಾಚಿಕೆಯಾಗುವುದಿಲ್ಲವೇ? ಎಂದು ಕೇಳುತ್ತಾರೆ.

ವಯಸ್ಸಿಗೆ ನಾಚಿಕೆಯಿದೆ! ಹೊಟ್ಟೆ ಹಸಿವಿಗೆ ನಾಚಿಕೆಯಿಲ್ಲ! ನೀವು ನನ್ನನ್ನು ಪೋಲೀಸರಿಗೆ ಒಪ್ಪಿಸಿ. ಸೆರೆಮನೆಗೆ ಕಳುಹಿಸಿ. ಅಲ್ಲಾದರೂ ನನಗೆ ಎರಡು ಹೊತ್ತು ಊಟ ಸಿಗಬಹುದು. ಆದರೆ ನನ್ನ ಮುದಿ ಹೆಂಡತಿಗೆ ಯಾರು ಊಟ ಕೊಡುತ್ತಾರೆ?’ ಎಂದು ಹೇಳಿ ಕಣ್ಣೀರು ಸುರಿಸಿದರು. ಅವರ ಮಾತುಗಳನ್ನು ಕೇಳುತ್ತಾ ಹಿರಿಯರ ಕಣ್ಣುಗಳೂ ತುಂಬಿ ಬಂದವು. ಅವರು ನಾಚಿಕೆಯಾಗಬೇಕಾದದ್ದು ಅವರಿಗೋ ಅಥವಾ ಅವರ ಅಸಹಾಯಕ ಪರಿಸ್ಥಿತಿಗೆ ಕಾರಣವಾದವರಿಗೋ ಎಂದು ಯೋಚಿಸಿದರಂತೆ. ಉತ್ತರ ಸಿಗದೆ ಪೇಚಾಡಿದರಂತೆ.                                         ಕೃಪೆ: ಷಡಕ್ಷರಿ.                                                 ಸಂಗ್ರಹ: ವೀರೇಶ್ ಅರಸಿಕೆರೆ.
Share:

ನಾನು....ನನ್ನ ಕನಸು.!


"ನಾನು...ನನ್ನ ಕನಸು" ಒಂದು ಸಿನೆಮಾದ ಹೆಸರಿನಂತಿದೆಯಲ್ಲ ಅಂತ ಅನಿಸುತ್ತಿದೆಯಲ್ಲ..! ನಿಜ ಇದೇ ಸಾಲು ವಿದ್ಯಾರ್ಥಿಗಳಿಗೆ, ಪರೀಕ್ಷೆ ಎದುರಿಸುವ ಆತ್ಮ ಸ್ಥೈರ್ಯ ತುಂಬಿತು. ನಾವು  ಒಮ್ಮೊಮ್ಮೆ ಕೆಲವು ವಿದ್ಯಾರ್ಥಿಗಳ ಬಗ್ಗೆ ಪೂರ್ವ ನಿರ್ಧರಿತವಾಗಿರುತ್ತೇವೆ ಅವನಿಂದ ಸಾಧ್ಯವಿಲ್ಲ, ಎಷ್ಟು ಹೇಳಿದರೂ ಅವನು ಬದಲಾಗುವುದಿಲ್ಲ, ಓದಿನ ಕಡೆಗೆ ಆಸಕ್ತಿ ಇಲ್ಲ, ದಡ್ಡ ಹೀಗೆ ಸಾಗುತ್ತೆ ನಕಾರಾತ್ಮಕ ಪಟ್ಟಿ. ನಿಜವಾಗಿಯೂ ನಾವು ಮಾಡುವ ದೊಡ್ಡ ತಪ್ಪು ಇದು. ಅವರು ಆ ರೀತಿಯ ವರ್ತನೆಗೆ ಕೆಲವು ಸಲ ನಾವೇ ಕಾರವಾಗಬಹುದು.
ನಮ್ಮ ಶಾಲೆಯಲ್ಲಿ ಒಂದು ಪರೀಕ್ಷಾ ಭಯ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಪ್ರವೀಣ ದೇಶಪಾಂಡೆ ಅನ್ನುವವರು ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ಅವರ ಆರಂಭಿಕ ಸಾಲೇ..."ನಾನು ನನ್ನ ಕನಸು" ವಿದ್ಯಾರ್ಥಿಗಳಲ್ಲಿ ಕನಸನ್ನು ಬಿತ್ತುವ ಪ್ರಯತ್ನ ಸಾಗಿತು , ಪ್ರತಿ ವಿದ್ಯಾರ್ಥಿಗಳು ತಮ್ಮ ಕನಸು ಕಟ್ಟಿಕೊಳ್ಳಲು, ಅವರು ವ್ಯಕ್ತಪಡಿಸಲು ಸತತ ನಿರಂತರವಾಗಿ ಮೂರು ಘಂಟೆಗಳು ಬೇಕಾಯಿತು..! ವಿದ್ಯಾರ್ಥಿಗಳ ಮೊಗದಲ್ಲಿ ವಿರಾಮ, ಹಸಿವಿನ ಭಾವ ಇಲ್ಲದೆ, ಆಸಕ್ತಿಯ ನಗುಮೊಗದ ಭಾವದೊಂದಿಗೆ..! ಹಾಗಾದರೆ ಆ ಗುರು ನಮ್ಮ ವಿದ್ಯಾರ್ಥಿಗಳನ್ನು ಯಾವ ವಿಧಾನದಿಂದ ಅವರ ಆಸಕ್ತಿಯನ್ನು ತನ್ನ ಕಡೆಗೆ ಹಿಡಿದಿಟ್ಟುಕೊಂಡಿರಬೇಕು ನೀವೇ ಊಹಿಸಿ. ನಮಗೂ ಆಶ್ಚರ್ಯವಾಯಿತು ಎಂದೂ ಉತ್ತರಿಸದ, ಮುಂದೆ ಬರದ ಮಾತನಾಡದ ವಿದ್ಯಾರ್ಥಿಗಳು ಮುಂದೆ ಬಂದು ನಾವು ಖಂಡಿತ ನಮ್ಮ ಕನಸು, ನಿಮ್ಮ ಕನಸು, ನಮ್ಮ ತಂದೆ ತಾಯಿಯ ಕನಸು ನನಸಾಗಿಸಲು ಇವತ್ತಿನಿಂದಲೇ ಕಾರ್ಯಪ್ರವೃತ್ತವಾಗುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿದರು...! ನಿಜಕ್ಕೂ ಇದಕ್ಕಿಂತ ಹೆಚ್ಚಿಗೇನು ಬೇಕು ಗುರುವಿಗೆ...? ಹಾಗದರೆ ಆ ಗುರು ಮಾಡಿದ್ದಾದರೂ ಏನು..? ಸರಳ ..! ದೊಡ್ಡ ದೊಡ್ಡದಾದ ಸಿದ್ದಾಂತಗಳನ್ನು, ತತ್ವಗಳನ್ನು , ಆದರ್ಶಗಳನ್ನು , ಕಥೆಗಳನ್ನು ಹೇಳಲಿಲ್ಲ. ಬದಲಾಗಿ ಪ್ರತಿ ವಿದ್ಯಾರ್ಥಿ ಯ ಮನಸ್ಸು ಅರ್ಥೈಸಿಕೊಳ್ಳು ಕೆಲ ಹೊತ್ತು ಕೆಲ ತಮ್ಮ ಸುತ್ತಲಿನ ಪ್ರಶ್ನೆಗಳನ್ನು ಕೇಳಿದರು...ಪ್ರಶ್ನೆಗಳಿಗೆ ಬರುವ ಉತ್ತರಗಳನ್ನು ಕೇಳಿ ಸರಿ ಇರುವದನ್ನು ಹೊಗಳುತ್ತಾ ತಪ್ಪು ಇರುವದನ್ನು ಸರಿಪಡಿಸುತ್ತಾ ಸಾಗಿದರು... ಅಲ್ಲಿಗೆ ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಅವರ ಕೌಟುಂಬಿಕ, ತಂದೆ ತಾಯಿ ಕನಸು, ತಮ್ಮ ಮಕ್ಕಳ ಬಗೆಗಿನ ಪಾಲಕರ ಕನಸು, ಅದರ ನನಸಿಗಾಗಿ ಪಡುತ್ತಿರುವ ಕಷ್ಟಗಳನ್ನು ಏಳೆ ಏಳೆಯಾಗಿ ಇಡುತ್ತಾ ಹೋದರು.. ಮಕ್ಕಳ ಮನಸ್ಸನ್ನು ಹಿಡಿತಕ್ಕೆ ತರಲು ಅನೇಕ ವಿಡಿಯೋಗಳನ್ನು , ಚಿತ್ರಗಳನ್ನು ತೋರಿಸಿದರು, ಮಕ್ಕಳು ಎಲ್ಲಿ ಎಡವುತ್ತಿದ್ದಾರೆ ಎನ್ನುವದನ್ನು ತಿಳಿಸಿದರು... ಕನಸಿನ ಮಹತ್ವ ತಿಳಿಸಿದರು. ಕನಸು ಗುರಿಯಾಗಬೇಕು ಗುರಿ ಈಡೇರಿಕೆಗಾಗಿ 100% ಪ್ರಯತ್ನ ಬೇಕು ಎಂಬುವದನ್ನು ತಿಳಿಸಿದರು. ಈ ಪ್ರಯತ್ನದಲ್ಲಿ ಗುರುವಿನ ಮಾರ್ಗದರ್ಶನ ಬಹಳ ಮುಖ್ಯ ಎಂದು ಸಾರಿದರು. ಯಶಸ್ಸು ಒಂದು ಎರಡು ದಿನದಲ್ಲಿ ಸಿಗುವದಲ್ಲ, ನಿರಂತರ ಪ್ರಯತ್ನ ದಿಂದ ಮಾತ್ರ ಸಾಧ್ಯ. ಕೆಲವರಿಗೆ ದೇವರು ಹುಟ್ಟುತ್ತಲೇ ಕೆಲವು ವಿಶೇಷ ಶಕ್ತಿಯನ್ನು, ಕ್ರಿಯಾಶೀಲತೆಯನ್ನು ನೀಡಿರುತ್ತಾನೆ, ಅವುಗಳನ್ನು ನಿಮ್ಮ ಆಸಕ್ತಿಯನ್ನು ಹೊರಹಾಕಿ ಯಶಸ್ವಿಗೆ ಭದ್ರಬುನಾಧಿ ಹಾಕಿಕೊಳ್ಳಿ, ಆದರ್ಶ ವ್ಯಕ್ತಿಯಾಗಿ ನಾವು ಅನೇಕರ ಹೆಸರು ಹೇಳುತ್ತೇವೆ ಆದರೆ ಅವರ ಆದರ್ಶಗಳು, ಸಾಧನೆಗಳು ನಮಗೆ ಗೊತ್ತೆಯಿಲ್ಲ ..ಬದಲಿಗೆ ನಿಮ್ಮನ್ನು ನೀವು ಆದರ್ಶವಾಗಿಸಿ, ನಿಮ್ಮ ಗುರುಗಳನ್ನು ಆದರ್ಶವಾಗಿಸಿಕೊಳ್ಳಿ .. ಎನ್ನುವ ಭಾವನಾತ್ಮಕ ಅಂಶಗಳಿಂದ ಇನ್ನಷ್ಟು ಅವರನ್ನು ಪ್ರೇರಿತಗೊಳಿಸಿರು.
ಓದುವ ಸಮಯ, ಓದುವ ರೀತಿ, ಯಾವುದನ್ನು ಹೇಗೆ ? ಓದಬೇಕು ಎಂಬುದನ್ನು ತಿಳಿಸುವದರ ಮೂಲಕ ಅವರಿಂದ ಪರೀಕ್ಷಾ ಭಯವನ್ನು ಹೋಗಲಾಡಿಸಿದರು. SSLCಯಲ್ಲಿ ಶೇಖಡಾ 30, 60,70, 80.  ಇದ್ದ ಗುರಿ 100% ಬಂದಾಗ ಈ ಕಾರ್ಯಕ್ರಮದ ಉದ್ದೇಶ ಈಡೇರಿತ್ತು. ಇದೇ ಬೇಕಾಗಿತ್ತು ನಮಗೆ ಉನ್ನತ ಮಟ್ಟದ ಗುರಿ ಒಂದು ಸಣ್ಣ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.
ಗುರುವಾಗಿ ನಾವು ಮಕ್ಕಳ ಮನಸ್ಸನ್ನು ಮೊದಲು ಅರ್ಥೈಸಿಕೊಂಡಾಗ ಖಂಡಿತ ಆ ಮಗುವಿನಲ್ಲಿ ಕನಸು ಬಿತ್ತಲು ಸಾಧ್ಯವಾಗುತ್ತದೆ. ಇದು ನಾನು ಬರೆಯುತ್ತಿರು ಮೊದಲ article ಇದಕ್ಕೆ ಪ್ರೇರಣೆಯಾದ ಪ್ರವೀಣ ದೇಶಪಾಂಡೆಯವರಿಗೆ ಧನ್ಯವಾದಗಳು.

ಶ್ರೀ ರವೀಂದ್ರ ಜಿ ಆಹೇರಿ
ಕಲಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ಕೋಣನಕೇರಿ.
9739138998

Share:

ಪರಿಶ್ರಮದ ಮಹತ್ವ

ಪರಿಶ್ರಮದ ಮಹತ್ವ. 💐

ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲೆಯೂ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. ನಮ್ಮ ಔಷಧಾಲಯಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಮದ್ದೆಂದರೆ-ನಿದ್ರಾ ಗುಳಿಗೆಯೆನ್ನುತ್ತಾರೆ. ಆದರೆ ಹೀಗೆ ನಿದ್ರಾ ಗುಳಿಗೆಯನ್ನು ನುಂಗುವುದು ತಪ್ಪು. ಏಕೆಂದರೆ ಅದೊಂದು ಕೆಟ್ಟ ಚಟವಾಗಿ ಬಿಡುವ ಅಪಾಯವಿದೆ-ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಹಾಗಿದ್ದರೆ ಸಹಜವಾಗಿ ನಿದ್ದೆ ಬರುವಂತೆ ಮಾಡುವ ವಿಧಾನವೇನು ? ಎಂಬುದನ್ನು ತಿಳಿಸುವ ಒಂದು ರೋಚಕ ಪ್ರಸಂಗ ಇಲ್ಲಿದೆ. ಮೊಗಲ ವಂಶದ ಅರಸನಾದ ಅಕ್ಬರನಿಗೆ ಅತ್ಯಂತ ಆತ್ಮೀಯ ಒಡನಾಡಿಯಾಗಿದ್ದವನು-ಬೀರ್‌ಬಲ್. ಇಬ್ಬರೂ ಜತೆಯಾಗಿ ಸಂಜೆಯ ವಾಯು-ವಿಹಾರಕ್ಕೆ ಒಂದು ಹಳ್ಳಿಯ ರಸ್ತೆಯಲ್ಲಿ ಹೊರಟಿದ್ದರು. ದಾರಿಯಲ್ಲಿ ಕಲ್ಲು-ಮುಳ್ಳು ತುಂಬಿದ್ದುದರಿಂದ ಕಾಲಿಗೆ ಚುಚ್ಚ ತೊಡಗಿದವು. ಅಕ್ಬರನಿಗೆ ನಡೆಯುವುದೇ ಕಷ್ಟವಾಯಿತು. ಆದರೆ ಅದೇ ರಸ್ತೆಯ ಪಕ್ಕದಲ್ಲಿ ಹರಡಿದ್ದ ಕಲ್ಲುಗಳ ಮೇಲೆ ಚಾಪೆಯೊಂದನ್ನು ಬಿಡಿಸಿ, ಅದರ ಮೇಲೊಬ್ಬ ಕೂಲಿಕಾರ ಮಲಗಿದ್ದ; ಗಾಢನಿದ್ರೆಯಲ್ಲಿದ್ದ. ಅರಸನಿಗೆ ಆಶ್ಚರ್ಯವಾಯಿತು. ಬೀರ್‌ಬಲ್ಲನೊಡನೆ 'ಇದರ ಒಳಗುಟ್ಟೇನು ?' ಎಂದು ಪ್ರಶ್ನಿಸಿದ. ಬೀರ್‌ಬಲ್ 'ಅವನನ್ನು ಅರಮನೆಗೆ ಕರೆದೊಯ್ದು ವಿಚಾರಿಸೋಣ' ಎಂದು ನುಡಿದ, ಅರಮನೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿಸಿದ. ಆದರೆ ಅರಮನೆಗೆ ತಲಪಿದ ಬಳಿಕ, ಒಳ್ಳೆಯ ಊಟ ಮಾಡಿಸಿ, ಒಳ್ಳೆಯ ಹಾಸಿಗೆಯ ಮೇಲೆ ಮಲಗಿಸಿದರೂ ಆ ಕೂಲಿಕಾರನಿಗೆ ನಿದ್ದೆಯೇ ಬರಲಿಲ್ಲ. ಬಹುಶಃ ಚಾಪೆಯಡಿಯಲ್ಲಿ ಕಲ್ಲು ಇದ್ದರೆ ನಿದ್ದೆ ಬರುತ್ತದೆ ಎಂದು ಭಾವಿಸಿ ಹಾಸಿಗೆಯಡಿಯಲ್ಲಿ ಕಲ್ಲುಗಳನ್ನು ಹರಡಿ ಮಲಗಿಸಿದರು. ಊಹೂಂ, ನಿದ್ದೆ ಬರಲೇ ಇಲ್ಲ. ಆಗ ಕೂಲಿಕಾರನನ್ನೇ 'ನಿನಗೇಕೆ ನಿದ್ದೆ ಬರುತ್ತಿಲ್ಲ ?' ಎಂದು ಪ್ರಶ್ನಿಸಿದಾಗ, ಅವನು ಹೀಗೆ ಉತ್ತರಿಸಿದ 'ಮಹಾರಾಜರೆ, ನಾನೊಬ್ಬ ರೈತ. ದಿನವಿಡೀ ಹೊಲದಲ್ಲಿ ದುಡಿದಾಗ, ನನಗೆ ತಾನಾಗಿಯೇ ನಿದ್ದೆ ಬರುತ್ತದೆ. ಈ ಅರಮನೆಗೆ ಬಂದಾಗ ಅಂತಹ ದುಡಿತ, ಪರಿಶ್ರಮವಿಲ್ಲದೆ ನಿದ್ದೆ ಬರುತ್ತಿಲ್ಲ' ಈ ಮಾತನ್ನು ಕೇಳಿದಾಗ ಅಕ್ಬರನು ಸಂತಸದಿಂದ 'ಶಾಭಾಷ್' ಎಂದು ಚಪ್ಪಾಳೆ ತಟ್ಟಿದ. ಬೀರ್‌ಬಲ್‌ನೂ ಆನಂದದಿಂದ ಅರಸನನ್ನು ಅನುಕರಿಸುತ್ತಾ ಚಪ್ಪಾಳೆ ತಟ್ಟಿದ. ಇಲ್ಲಿ ಸಹಜ-ನಿದ್ರೆಯ ರಹಸ್ಯ ಮತ್ತು ಪರಿಶ್ರಮದ ಮಹತ್ವ ಅಡಗಿದೆ. ದುಡಿದು ತಿನ್ನುವ ರೈತರು, ಕೂಲಿಕಾರರು, ಜನಸಾಮಾನ್ಯರು ತಮ್ಮ ಪರಿಶ್ರಮದಿಂದ ಇಮ್ಮಡಿ ಲಾಭವನ್ನು ಪಡೆಯುತ್ತಾರೆ. ಹೊಲದಲ್ಲಿ ದುಡಿಯುವುದರಿಂದ ದೊರೆಯುವ ಆರ್ಥಿಕ ಲಾಭದೊಂದಿಗೇ, ದೈಹಿಕ ಆರೋಗ್ಯ ಲಾಭವನ್ನೂ ಪಡೆಯುತ್ತಾರೆ. ಈ ಆರೋಗ್ಯ ಲಾಭಕ್ಕೆ ಬೆಲೆ ಕಟ್ಟಲು ಸಾಧ್ಯವೇ ? - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

ಸಂಗ್ರಹ : ವೀರೇಶ್ ಅರಸಿಕೆರೆ.
Share:

ಶಿವಾಜಿ ಜಯಂತಿ..


Share:

ರೇಡಿಯೋ ಪಾಠಗಳು - 2018-19


ರೇಡಿಯೋ ಪಾಠಗಳಿಗಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ










11. Date : 22/02/2019 ಅಭಿವೃದ್ಧಿ,ಗ್ರಾಮೀಣ ಅಭಿವೃದ್ಧಿ, ಹಣ ಮತ್ತು ಸಾಲ ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ 

12. Date : 26/02/2019 ಬ್ಯಾಂಕು ವ್ಯವಹಾರಗಳು, ಉದ್ಯಮಗಾರಿಕೆ, ವ್ಯವಹಾರದ ಜಾಗತೀಕರಣ, ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ
Share:

ಸರ್ವಜ್ಞ ಜಯಂತಿಯ ಶುಭಾಶಯ




"ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ"
"ಸರ್ವಜ್ಞ ನೆಂಬುವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ"
"ಹರನೆಂಬ ದೈವ ನಮಗುಂಟು, ತಿರಿವರಿಂ ಸಿರಿವಂತರಾರು ಸರ್ವಜ್ಞ"
"ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಇಪ್ಪವನ ಕಂಡು ನಂಬುವುದು ಸರ್ವಜ್ಞ"

16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞನ ಜಯಂತಿ ಆಚರಣೆ ಮಾಡಲಾಗುತ್ತಿದೆ.

ಹಾವೇರಿ ಜಿಲ್ಲೆಯ ಅಬಲೂರು ಸರ್ವಜ್ಞನ ಜನ್ಮಸ್ಥಳ. ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ.

ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ.

ಇಂದು ರಾಜ್ಯದೆಲ್ಲಡೆ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ.






ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ
ಚಿಂತೆಯಲಿ ದೇಹ ಬಡವಕ್ಕು ಶಿವ
ತೋರಿದಂತಿಹುದೇ ಲೇಸು ಸರ್ವಜ್ಞ.


🌺
ಆದಿ ದೈವವನು ತಾ ಭೇದಿಸಲಿಕರಿಯದಲೆ
ಹಾದಿಯಾ ಕಲ್ಲಿಗೆಡೆ ಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ.


🌺
ತನ್ನಲಿಹ ಲಿಂಗವನು ಮನ್ನಿಸಲಿಕರಿಯದಲೆ
ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ.


🌺
ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ ಕೈ ಮುಗಿವ
ಬಣಗುಗಳ ನೋಡು ಸರ್ವಜ್ಞ.


🌺
ಕಲ್ಲು ಕಲ್ಲನೆ ಒಟ್ಟಿ ಕಲ್ಲಿನಲೆ ಮನೆಕಟ್ಟಿ
ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ
ಕಲ್ಲಿನಂತಿಹರು ಸರ್ವಜ್ಞ.


🌺
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ.


🌺
ಲಿಂಗಕ್ಕೆ ಕಡೆ ಎಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೇ ? ಸರ್ವಜ್ಞ.


🌺
ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ, ಲಿಂಗಕ್ಕೆ
ದೇಗುಲವೇ ಇಲ್ಲ ಸರ್ವಜ್ಞ.


🌺
ಕಾಯ ಕಮಲವೇ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿಂ ಶಿವಪೂಜೆ ಮಾಡುವವನ
ದೇವನೆಂದೆಂಬೆ ಸರ್ವಜ್ಞ.


🌺
ಓದು ವಾದಗಳೇಕೆ ? ಗಾದೆಯಾ ಮಾತೇಕೆ ?
ವೇದ ಪುರಾಣ ತನಗೇಕೆ ? ಲಿಂಗದಾ
ಹಾದಿಯರಿಯದವಗೆ ಸರ್ವಜ್ಞ.


🌺
ಊರಿಂಗೆ ದಾರಿಯನು ಆರು ತೋರಿದರೇನು ?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ.


🌺
ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಬರೆವವರ ಕೂಡ ಹಗೆ ಬೇಡ ಬಂಗಾರ
ದೆರವು ಬೇಡೆಂದ ಸರ್ವಜ್ಞ.


🌺
ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿ ಬಂದಂತೆ ಸರ್ವಜ್ಞ.


🌺
ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು ?
ಮನದಲ್ಲಿ ನೆನೆಯದಿರುವವನು ದೇಗುಲದ
ಕೊನೆಯಲಿದ್ದೇನು ? ಸರ್ವಜ್ಞ.


🌺
ಲಿಂಗದಾ ಗುಡಿ ಲೇಸು ಗಂಗೆಯಾ ತಡಿ ಲೇಸು
ಲಿಂಗಸಂಗಿಗಳ ನುಡಿ ಲೇಸು, ಭಕ್ತರಾ
ಸಂಗವೇ ಲೇಸು ಸರ್ವಜ್ಞ.


🌺
ಸತಿಯರಿರ್ದಡೆ ಏನು ? ಸುತರಾಗಿ ಫಲವೇನು ?
ಶತಕೋಟಿ ಧನವ ಗಳಿಸೇನು? ಭಕ್ತಿಯಾ
ಸ್ಥಿತಿಯಿಲ್ಲದನಕ ಸರ್ವಜ್ಞ.


🌺
ಕಚ್ಚೆ ಕೈ ಬಾಯಿಗಳು ಇಚ್ಚೆಯಲಿ ಇದ್ದಿಹರೆ
ಅಚ್ಯುತನು ಅಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ.


🌺
ಭಿತ್ತಿಯಾ ಚಿತ್ರದಲಿ ತತ್ವ ತಾ ನೆರೆದಿಹುದೇ ?
ಚಿತ್ರತ್ವ ತನ್ನ ನಿಜದೊಳಗೆ, ತ್ರೈ ಜಗದ
ತತ್ವ ತಾನೆಂದ ಸರ್ವಜ್ಞ.


🌺
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯಾ ಸರ್ವಜ್ಞ.


🌺
ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಮೊನೆಯಲ್ಲಿ
ಎಲ್ಲಿ ನೆನೆದಲ್ಲಿ ಶಿವನಿರ್ಪ ಅವ ನೀನಿದ್ದಲ್ಲಿಯೇ
ಇರುವ ಸರ್ವಜ್ಞ.


🌺
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟದೊಳಗೆ ಇರುವಾತ
ತನ್ನೊಳಗೆ ಇರನೆ? ಸರ್ವಜ್ಞ.


🌺
ಇಲ್ಲಿಲ್ಲವೆಂಬುದನು ಇಲ್ಲಿಯೇ ಅರಸುವುದು
ಇಲ್ಲಿಲ್ಲವೆಂದರಿದ ಒಡನೆ ಜಗವೆಲ್ಲ
ಒಳಗಿಕ್ಕು ಸರ್ವಜ್ಞ.


🌺
ಏನಾದಡೇನಯ್ಯ ತಾನಾಗದಿರುವನಕ
ತಾನಾಗಿ ತನ್ನನರಿದಿರಲು ಲೋಕದಲಿ
ಏನಾದಡೇನು ? ಸರ್ವಜ್ಞ.


🌺
ತನ್ನ ತಾನರಿದವಂಗೆ ಭಿನ್ನ ಭಾವನೆಯಿಲ್ಲ
ತನ್ನವರು ಇಲ್ಲ ಪರರಿಲ್ಲ, ತ್ರೈಭುವನವೇ
ತನ್ನೊಳಗೆ ಇಹುದು ಸರ್ವಜ್ಞ.


🌺
ಕೋಟಿಯನು ಕೊಟ್ಟರೂ ಕೂಟ ಕರ್ಮಿಯ ಹೊಲ್ಲ
ನೋಟದಲಿ ನಿಜವನರಿವ ಸುಜ್ಞಾನಿಯಾ
ಕೂಟವೇ ಲೇಸು ಸರ್ವಜ್ಞ.


🌺
ಸಾಲು ವೇದಗಳೇಕೆ ? ಮೂಲ ಮಂತ್ರಗಳೇಕೆ ?
ಮೇಲು ಕೀಳೆಂಬ ನುಡಿಯೇಕೆ ? ತತ್ವದಾ
ಕೀಲನರಿದವಗೆ ಸರ್ವಜ್ಞ.


🌺
ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕಾ
ರಕ್ಕರವೇ ಸಾಕು ಸರ್ವಜ್ಞ.


🌺
ಎಣ್ಣೆ ಬೆಣ್ಣೆಯ ರಿಣವು ಅನ್ನವಸ್ತ್ರದ ರಿಣವು
ಹೊನ್ನು ಹೆಣ್ಣಿನಾ ರಿಣವು ತೀರಿದ ಕ್ಷಣದಿ
ಮಣ್ಣು ಪಾಲೆಂದ ಸರ್ವಜ್ಞ.


🌺
ಸಂಗವನು ತೊರೆದಂಗೆ ಅಂಗನೆಯರಿರಲೇಕೆ ?
ಬಂಗಾರವೇಕೆ ? ಬಲವೇಕೆ ? ಲೋಕದಾ
ಶೃಂಗಾರವೇಕೆ ? ಸರ್ವಜ್ಞ.


🌺
ವೇಷಗಳ ಧರಿಸೇನು? ದೇಶಗಳ ತಿರುಗೇನು?
ದೋಷಗಳ ಹೇಳಿ ಫಲವೇನು? ಮನಸಿನಾ
ಆಸೆ ಬಿಡದನಕ ಸರ್ವಜ್ಞ.


🌺
ಕತ್ತೆ ಬೂದಿಯಲಿ ಹೊರಳಿ ಮತ್ತೆ ಯತಿಯಪ್ಪುದೇ ?
ತತ್ವವರಿಯದಲೆ ಭಸಿತವಿಟ್ಟವ ಶುದ್ಧ
ಕತ್ತೆಯಂತೆಂದ ಸರ್ವಜ್ಞ.


🌺
ನಿತ್ಯ ನೇಮಗಳೇಕೆ ? ಮತ್ತೆ ಪೂಜೆಗಳೇಕೆ ?
ನೆತ್ತಿ ಬೋಳೇಕೆ ? ಜಡೆಯೇಕೆ ? ವದನದಲಿ
ಸತ್ಯವುಳ್ಳವಗೆ ಸರ್ವಜ್ಞ.


🌺
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರೆಮನೆಯಕ್ಕು ಸರ್ವಜ್ಞ.


🌺
ಕೊಟ್ಟದ್ದು ಕುದಿಯಲಿ ಬೇಡ ಕೊಟ್ಟಾಡಿಕೊಳಬೇಡ
ಕೊಟ್ಟು ನಾ ಕೆಟ್ಟೆನೆನಬೇಡ ಶಿವನಲ್ಲಿ
ಕಟ್ಟಿಹುದು ಬುತ್ತಿ ಸರ್ವಜ್ಞ.


🌺
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ.


🌺
ಕೊಡುವಾತನೇ ಹರನು ಪಡೆವಾತನೇ ನರನು
ಒಡಲ ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ.


🌺
ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ತಾನಿರಿಸಿ
ಸಣ್ಣಿಸಿಯೆ ನೆಲನ ಸಾರಿಸಿದವನ ಬಾಯೊಳಗೆ
ಮಣ್ಣು ಕಾಣಯ್ಯ ಸರ್ವಜ್ಞ.


🌺
ಇದ್ದುದನು ಬಿಟ್ಟು ಹೊರಗಿದ್ದುದನೆ ಬಯಸುತಲೆ
ಇದ್ದು ಉಣದಿಪ್ಪ ಬಾಯೊಳಗೆ ಕತ್ತೆಯಾ
ಲದ್ದಿಯೇ ಬೀಳ್ಗು ಸರ್ವಜ್ಞ.


🌺
ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲು
ಪುಣ್ಯವನು ಮಾಡಿ ಉಣಲೊಲ್ಲದವನಿರವು
ಉಣ್ಣೆಯಿಂ ಕಷ್ಟ ಸರ್ವಜ್ಞ.


🌺
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಡದವನ ಒಡವೆಯದು
ಕಳ್ಳಂಗೆ ನೃಪಗೆ ಸರ್ವಜ್ಞ.


🌺
ಕೊಟ್ಟುಂಬ ಕಾಲದಲಿ ಕೊಟ್ಟುಣಲಿಕರಿಯದಲೆ
ಹುಟ್ಟಿನಾ ಒಳಗೆ ಜೇನಿಕ್ಕಿ ಪರರಿಂಗೆ
ಬಿಟ್ಟು ಹೋದಂತೆ ಸರ್ವಜ್ಞ.


🌺
ಅಪಮಾನದೂಟದಿಂದುಪವಾಸವಿರಲೇಸು
ನೃಪನೆಯ್ದೆ ಬಡಿವ ಒಡ್ಡೋಲಗದಿಂದವೆ
ತಪವು ಲೇಸೆಂದ ಸರ್ವಜ್ಞ.


🌺
ಸತ್ಯರಾ ನುಡಿ ತೀರ್ಥ ನಿತ್ಯರಾ ನುಡಿ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವ
ನೀರೆತ್ತಣದು ತೀರ್ಥ ಸರ್ವಜ್ಞ.


🌺
ಧನಕನಕವುಳ್ಳನಕ ದಿನಕರವೋಲಕ್ಕು
ಧನಕನಕ ಹೋದ ಮರುದಿನವೆ ಹಾಳೂರ
ಶುನಕನಂತಕ್ಕು ಸರ್ವಜ್ಞ.


🌺
ಕಣ್ಣು ನಾಲಿಗೆ ಮನವು ತನ್ನದೆಂದೆನಬೇಡ
ಅನ್ಯರು ಕೊಂದರೆನಬೇಡ ಇವು ಮೂರು
ತನ್ನ ಕೊಲ್ಲುವವು ಸರ್ವಜ್ಞ.


🌺
ಇದ್ದಲ್ಲಿ ಸಲುವ ಹೋಗಿದ್ದಲ್ಲಿಯೂ ಸಲುವ
ವಿದ್ಯೆಯನು ಬಲ್ಲ ಬಡವ ತಾ ಗಿರಿಯ
ಮೇಲಿದ್ದರೂ ಸಲುವ ಸರ್ವಜ್ಞ.


🌺
ಮಾತು ಮಾತಿಗೆ ತಕ್ಕ ಮಾತು ಕೋಟಿಗಳುಂಟು
ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ
ಸೋತವನೇ ಜಾಣ ಸರ್ವಜ್ಞ.


🌺
ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕ್ಕೆ
ಮಾತೆ ಮಾಣಿಕವು ಸರ್ವಜ್ಞ.


🌺
ಮಾತ ಬಲ್ಲಾತಂಗೆ ಯಾತವದು ಸುರಿದಂತೆ
ಮಾತಾಡಲರಿಯದಾತಂಗೆ ಬರಿ ಯಾತ
ನೇತಾಡಿದಂತೆ ಸರ್ವಜ್ಞ.


🌺
ಮಾತು ಬಲ್ಲಹ ತಾನು ಸೋತು ಹೋಹುದು ಲೇಸು
ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ.


🌺
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದವನ ಬರಿ ಮಾತು ಕಿವಿಯೊಳಗೆ
ಕೂರ್ದಸಿಯ ಬಡಿದಂತೆ ಸರ್ವಜ್ಞ.


🌺
ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ
ಹೊತ್ತಾಗಿ ನುಡಿದ ಮಾತು ಕೈ ಜಾರಿದ
ಮುತ್ತಿನಂತಿಹುದು ಸರ್ವಜ್ಞ.


🌺
ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು
ಮಾತು ತಾನರಿಯದಧಮಂಗೆ ಮಾಣಿಕವು
ತೂತು ಬಿದ್ದಂತೆ ಸರ್ವಜ್ಞ.


🌺
ಮಾತಿಂಗೆ ಮಾತುಗಳು ಓತು ಸಾಸಿರವುಂಟು
ಮಾತಾಡಿದಂತೆ ನಡೆದರೆ ಕೈಲಾಸಕಾತನೇ
ಒಡೆಯ ಸರ್ವಜ್ಞ.


🌺
ಆಡದಲೆ ಮಾಡುವನು ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು ಅಧಮ ತಾ
ನಾಡಿಯೂ ಮಾಡದವನು ಸರ್ವಜ್ಞ.


🌺
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೇ ಕೆಡುಗು ಸರ್ವಜ್ಞ.


🌺
ಸಾಲವನು ಕೊಂಬಾಗ ಹಾಲುಹಣ್ಣುಂಡಂತೆ
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ.


🌺
ಬೋರಾಡಿ ಸಾಲವನು ಹಾರಾಡಿ ಒಯ್ಯುವನು
ಈರಾಡಿ ಬಂದು ಕೇಳಿದರೆ ಸಾಲಿಗನು
ಚೀರಾಡಿ ಕೊಡನು ಸರ್ವಜ್ಞ.


🌺
ಬೆಂಡಿರದೆ ಮುಳುಗಿದರು ಗುಂಡೆದ್ದು ತೇಲಿದರು
ಬಂಡಿಯಾ ನೊಗವು ಚಿಗಿತರೂ ಸಾಲಿಗನು
ಕೊಂಡದ್ದು ಕೊಡನು ಸರ್ವಜ್ಞ.


🌺
ಇದ್ದೂರ ಸಾಲ ಹೇಗಿದ್ದರೂ ಕೊಳಬೇಡ
ಇದ್ದುದನು ಸೆಳೆದು ಗುದ್ದುತ ಸಾಲವ
ನೊದ್ದು ಕೇಳುವನು ಸರ್ವಜ್ಞ.


🌺
ಉದ್ದರಿಯ ಕೊಟ್ಟಣ್ಣ ಹದ್ದಾದ ಹಾವಾದ
ಎದ್ದೆದ್ದು ಬರುವ ನಾಯಾದ ಮೈಲಾರ
ಗೊಗ್ಗಯ್ಯನಾದ ಸರ್ವಜ್ಞ.


🌺
ಹಾಲು ಬೋನವು ಲೇಸು ಮಾಲೆ ಕೊರಳಿಗೆ ಲೇಸು
ಸಾಲವಿಲ್ಲದವನ ಮನೆ ಲೇಸು ಬಾಲಕರ
ಲೀಲೆ ಲೇಸೆಂದ ಸರ್ವಜ್ಞ.


🌺
ಸಿರಿಯ ಸಂಸಾರವನು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ ಸರ್ವಜ್ಞ.


🌺
ಅತಿಯಾಸೆ ಮಾಡುವವನು ಗತಿಗೇಡಿಯಾಗುವನು
ಅತಿ ಆಸೆಯಿಂದ ಮತಿ ಕೆಡುಗು ಅತಿಯಿಂದ
ಸತಿಸುತರು ಕೆಡುಗು ಸರ್ವಜ್ಞ.


🌺
ನಲ್ಲ ಒಲ್ಲಿಯನೊಲ್ಲ ನೆಲ್ಲಕ್ಕಿ ಬೋನೊಲ್ಲ
ಅಲ್ಲವನು ಒಲ್ಲ ಮೊಸರೊಲ್ಲ ಯಾಕೊಲ್ಲ ?
ಇಲ್ಲ ಅದಕೊಲ್ಲ ಸರ್ವಜ್ಞ.


🌺
ಕಾಯಕವು ಉಳ್ಳನಕ ನಾಯಕನು ಎನಿಸಿಪ್ಪ
ಕಾಯಕವು ತೀರ್ದ ಮರುದಿನವೇ ಸುಡುಗಾಡ
ನಾಯಕನು ಎನಿಪ ಸರ್ವಜ್ಞ.


🌺
ಆಳಾಗಬಲ್ಲವನು ಆಳುವನು ಅರಸಾಗಿ
ಆಳಾಗಿ ಬಾಳಲರಿಯದವನು ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ.


🌺
ನಾರಿ ಪರರಿಗುಪಕಾರಿ ನಾರಿ ಸ್ವರ್ಗಕ್ಕೆ ದಾರಿ
ನಾರಿ ಸಕಲರಿಗೆ ಉಪಕಾರಿ ಮುನಿದರಾ
ನಾರಿಯೇ ಮಾರಿ ಸರ್ವಜ್ಞ.


🌺
ಮಾತನೇ ಉಣಕೊಟ್ಟು ಮಾತನೇ ಉಡಕೊಟ್ಟು
ಮಾತಿನ ಮುದ್ದ ತೊಡಕೊಟ್ಟು ಬೆಳಗೆ ಹೋ
ದಾತನೇ ಜಾಣ ಸರ್ವಜ್ಞ.


🌺
ಹಸಿವಿಲ್ಲದುಣಬೇಡ ಹಸಿದು ಮತ್ತಿರಬೇಡ
ಬಿಸಿ ಮಾಡಿ ತಂಗುಳುಣಬೇಡ ವೈದ್ಯನಾ
ಗಸಣೆಯೇ ಬೇಡ ಸರ್ವಜ್ಞ.


🌺
ನಾಲಿಗೆಯ ಕಟ್ಟಿದನು ಕಾಲನಿಗೆ ದೂರನಹ
ನಾಲಿಗೆ ರುಚಿಗಳ ಮೇಲಾಡುತಿರಲವನ
ಕಾಲಹತ್ತರವು ಸರ್ವಜ್ಞ.


🌺
ಕೊಟ್ಟಣವ ಕುಟ್ಟುವುದು ಮೊಟ್ಟೆಯನು ಹೊರಿಸುವುದು
ಬಿಟ್ಟಿಕೂಲಿಗಳ ಮಾಡಿಸುವುದು ಗೇಣು
ಹೊಟ್ಟೆ ಕಾಣಯ್ಯ ಸರ್ವಜ್ಞ.


🌺
ಸಾಲವನು ಮಾಡುವದು ಹೇಲ ತಾ ಬಳಿಸುವುದು
ಕಾಲಿನಾ ಕೆಳಗೆ ಕೆಡಹುವದು ತುತ್ತಿನಾ
ಚೀಲ ಕಾಣಯ್ಯ ಸರ್ವಜ್ಞ.


🌺
ಕುಲವನ್ನು ಕೆಡಿಸುವದು ಛಲವನ್ನು ಬಿಡಿಸುವದು
ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ
ಬಲವ ನೋಡೆಂದ ಸರ್ವಜ್ಞ.


🌺
ಅಟ್ಟಿ ಹರಿದಾಡುವದು ಬಟ್ಟೆಯಲಿ ಮೆರೆಯುವದು
ಹೊಟ್ಟೆ ಹುಣ್ಣಾಗಿ ನಗಿಸುವದು ಒಂದು ಹಿಡಿ
ಹಿಟ್ಟು ಕಾಣಯ್ಯಾ ಸರ್ವಜ್ಞ.


🌺
ಉಕ್ಕುವದು ಸೊಕ್ಕುವದು ಕೆಕ್ಕನೇ ಕೆಲೆಯುವದು
ರಕ್ಕಸನವೋಲು ಮದಿಸುವದು ಒಂದು ಸೆರೆ
ಯಕ್ಕಿಯಾ ಗುಣವು ಸರ್ವಜ್ಞ.


🌺
ಬಟ್ಟೆಯನು ಉಡಿಸುವದು ಸೆಟ್ಟಿಯೆಂದೆನಿಸುವದು
ಕಟ್ಟಾಣಿ ಸತಿಯ ಕುಣಿಸುವದು ತಾ ಚೋಟು
ಹೊಟ್ಟೆ ಕಾಣಯ್ಯ ಸರ್ವಜ್ಞ.


🌺
ನೇತ್ರಗಳು ಕಾಣಿಸವು ಶ್ರೋತ್ರಗಳು ಕೇಳಿಸವು
ಗಾತ್ರಗಳು ಎದ್ದು ನಡೆಯುವವು ಕೂಳೊಂದು
ರಾತ್ರಿ ತಪ್ಪಿದರೆ ಸರ್ವಜ್ಞ.


🌺
ಅಡಿಗಳೆದ್ದೇಳವವು ನುಡಿಗಳೂ ಕೇಳಿಸವು
ಮಡದಿಯರ ಮಾತು ಸೊಗಸದು ಕೂಳೊಂದು
ತಡೆದರಗಳಿಗೆ ಸರ್ವಜ್ಞ.


🌺
ನಿದ್ದೆಗಳು ಬಾರವವು ಬುದ್ಧಿಗಳು ತಿಳಿಯವವು
ಮುದ್ದಿನಾ ಮಾತು ಸೊಗಸವವು ಬೋನದಾ
ಮುದ್ದೆ ತಪ್ಪಿದರೆ ಸರ್ವಜ್ಞ.


🌺
ಎತ್ತ ಹೋದರು ಒಂದು ತುತ್ತು ಕಟ್ಟಿರಬೇಕು
ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು
ಎತ್ತಬೇಕೆಂದ ಸರ್ವಜ್ಞ.


🌺
ತಿತ್ತಿ ಹೊಟ್ಟೆಗೆ ಒಂದು ತುತ್ತು ತಾ ಹಾಕುವದು
ತುತ್ತೆಂಬ ಶಿವನ ಬಿಟ್ಟಿಹರೆ ಸುಡುಗಾಡಿ
ಗೆತ್ತಬೇಕೆಂದ ಸರ್ವಜ್ಞ.


🌺
ಅನ್ನದೇವರ ಮುಂದೆ ಇನ್ನು ದೇವರು ಉಂಟೇ ?
ಅನ್ನವಿರುವ ತನಕ ಪ್ರಾಣವೀ ಜಗದೊಳಗೆ
ಅನ್ನವೇ ದೈವ ಸರ್ವಜ್ಞ.


🌺
ಅನ್ನವನು ಇಕ್ಕುವದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.


🌺
ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ
ಅಲ್ಲದಹುದೆಂಬ ಅಜ್ಞಾನಿಯೊಡನಾಟ
ಕಲ್ಲು ಹಾದಂತೆ ಸರ್ವಜ್ಞ.


🌺
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಲು
ಕ್ಷಣಕೊಮ್ಮೆಯೊಂದ ಗುಣಿಸುವವನ ಜಪಕೊಂದು
ಎಣಿಕೆಯದುಂಟೆ ಸರ್ವಜ್ಞ.


🌺
ಭಿಕ್ಷವ ತಂದಾದೊಡಂ ಭಿಕ್ಷವನಿಕ್ಕುಣಬೇಕು
ಅಕ್ಷಯಪದವು ತನಗಕ್ಕು ಇಕ್ಕದೊಡೆ
ಭಿಕ್ಷುಕನೆಯಕ್ಕು ಸರ್ವಜ್ಞ.


🌺
ಮಾನವನ ದುರ್ಗುಣವನೇನೆಂದು ಬಣ್ಣಿಸುವೆ
ದಾನವಗೈಯೆನಲು ಕನಲುವ ದಂಡವನು
ಮೌನದಿಂ ತೆರುವ ಸರ್ವಜ್ಞ.


🌺
ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ
ಲೆಕ್ಕವ ಕಲಿತ ಕರಣಿಕನು ನರಕದಲಿ
ಹೊಕ್ಕಿರಲು ಕಲಿತ ಸರ್ವಜ್ಞ.


🌺
ಉತ್ತೊಮ್ಮೆ ಹರಗುವುದು ಬಿತ್ತೊಮ್ಮೆ ಹರಗುವುದು
ಮತ್ತೊಮ್ಮೆ ಹರಗಿ ಕಳೆದೆಗೆದು ಬೆಳೆಯೆ
ತನ್ನೆತ್ತರ ಬೆಳವ ಸರ್ವಜ್ಞ.


🌺
ಕ್ಷೇತ್ರವರಿಯದ ಬೀಜ ಪಾತ್ರವರಿಯದ ದಾನ
ಸಾತ್ವಿಕವನರಿಯದನ ಧರ್ಮದರ್ದಿಗನು
ಮೂತ್ರಗೈದಂತೆ ಸರ್ವಜ್ಞ.


🌺
ಅಕ್ಕರ ಹದಿನಾರುಲಕ್ಕ ಓದಿದರೇನು
ತಕ್ಕುದನರಿಯ ದಯವಿಲ್ಲದವನೋದು
ರಕ್ಕಸರೋದು ಸರ್ವಜ್ಞ.


🌺
ಹಲವನೋದಿದಡೇನು ಚೆಲುವನಾದಡೆಯೇನು
ಕುಲವಂತನಾಗಿ ಫಲವೇನು ಲಿಂಗದ
ಒಲವಿಲ್ಲದನಕ ಸರ್ವಜ್ಞ.


🌺
ಲಿಂಗ ಉಳ್ಳನೆ ಪುರುಷ ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ ವತುಳಸುಖ
ಲಿಂಗದಿಂ ಜನನ ಸರ್ವಜ್ಞ.


🌺
ನಡೆಯುವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ
ನಡುವೆ ಎತ್ತಣದು? ಸರ್ವಜ್ಞ.


🌺
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ?
ಜಾತಿವಿಜಾತಿಯೆನಬೇಡ ದೇವನೊಲಿದಾತನೇ
ಜಾತ ಸರ್ವಜ್ಞ.


🌺
ಎತ್ತಾಗಿ ತೊತ್ತಾಗಿ ಹಿತ್ತಲದ ಗಿಡವಾಗಿ
ಮತ್ತೆ ಪಾದದಾ ಕೆರವಾಗಿ ಗುರುವಿನಾ
ಹತ್ತಿಲಿರು ಸರ್ವಜ್ಞ.


🌺
ವಿದ್ಯೆ ಕಲಿತರೆ ಇಲ್ಲ ಬುದ್ಧಿ ಕಲಿತರೆ ಇಲ್ಲ
ಉದ್ಯೋಗ ಮಾಡಿದರೆ ಇಲ್ಲ ಗುರುಕರುಣ
ವಿದ್ದಲ್ಲದಿಲ್ಲ ಸರ್ವಜ್ಞ.


🌺
ಎತ್ತ ಹೋದರೆ ಮನ ಹತ್ತಿಕೊಂಡಿರುತಿಹುದು
ಮತ್ತೊಬ್ಬ ಮುನಿದು ಕೊಳಲರಿಯ ಜ್ಞಾನದಾ
ಬಿತ್ತು ಲೇಸಯ್ಯ ಸರ್ವಜ್ಞ.
Share:

ಶ್ರೀ ಎಸ್‌ ವಾಯ್‌ ಬಾಗೋಡಿ, ತಾ: ಹಾವೇರಿ

ಶ್ರೀ ಎಸ್‌ ವಾಯ್‌ ಬಾಗೋಡಿ,
ಸರಕಾರಿ ಪ್ರೌಢಶಾಲೆ,ಮೇವುಂಡಿ ತಾ: ಹಾವೇರಿ ಜಿ: ಹಾವೇರಿ

ಇವರ ಸಂಪನ್ಮೂಕ್ಕಾಗಿ ಕ್ಲಿಕ್‌ ಮಾಡಿ.


  1. 3 ಮತ್ತು 4 ಅಂಕದ ಪ್ರಶ್ನೆ ಉತ್ತರಗಳು

Share:

ಬಾಳೇಶ ಹತ್ತರಿಕಿ ಅವರ FA ಚಟುವಟಿಕೆಗಳು

FA ACTIVITIES ಗಳಿಗಾಗಿ ಕೆಳಗೆ CLICK ಮಾಡಿ


Share:

ಬಾಳೇಶ ಹತ್ತರಕಿಯವರ ಸಂಪನ್ಮೂಲ


ಬಾಳೇಶ ಹತ್ತರಕಿಯವರ ಸಂಪನ್ಮೂಲ ಪಡೆಯಲು
CLICK BELOW HEADINGS

  1. PASSING PACKAGE
  2. ELC
  3. ಸಫಲತೆಯ ಮೆಟ್ಟಿಲು
Share:

One marks Questions in english medium


MOST IMPORTENT ONE MARK QUESTIONS AND ANSWER 10TH STANDRED

SOCIAL SCIENCE

PREPAID BY : SHIVARAJA K B

File Uploaded By : SHIVARAJA K B

SOCIAL SCIENCE

M M D R S TAYAKANAHALLI

Share:

ELC - ಸರಕಾರಿ ಪ್ರೌಢ ಶಾಲೆ, ಸಂಕೀಘಟ್ಟ ಮಾಗಡಿ ತಾ: ರಾಮನಗರ ಜಿ:

ಸರಕಾರಿ ಪ್ರೌಢ ಶಾಲೆ, ಸಂಕೀಘಟ್ಟ
ಮಾಗಡಿ ತಾ: ರಾಮನಗರ ಜಿ:
FILE UPLOAD BY - ರುದ್ರೇಶ ಕೆ. ಎಸ್

CLICK ON ELC 
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com