ಚಕ್ರವರ್ತಿಯೊಬ್ಬನಿಗೆ ಇಡೀ ಭೂಮಂಡಲವನೆಲ್ಲ ಗೆದ್ದು ತನ್ನ ಚಕ್ರಾಧಿಪತ್ಯ ಸ್ಥಾಪಿಸಬೇಕೆಂಬ ಬಯಕೆ.
ಅದರಂತೆ ತನ್ನ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋದ.. ಘನ ಘೋರ ಯುದ್ದ ನಡೆಯಿತು ಲಕ್ಷಾಂತರ ಸೈನಿಕರು ಮಡಿದರು.... ಚಕ್ರವರ್ತಿ ತಾನು ಹಮ್ಮಿನಲ್ಲಿ ಯುಧ್ಧ ಭೂಮಿಯಲ್ಲಿ ಹೊಡೆದುರುಳಿಸಿದ ಸೈನಿಕರ ಶವಗಳತ್ತ ನೋಡುತಿದ್ದ,,, ಅವನಿಗೆ ದಿಗ್ಭ್ಮಮೆಯಾಗುವ ದೃಶ್ಯವೊಂದು ಕಂಡು ಬಂದಿತು. ಆ ನಾಡಿನ ಆದಿವಾಸಿಯೊಬ್ಬ ಹೆಣವೊಂದನ್ನ ಕಿತ್ತು ಗಬಗಬ ತಿನ್ನುತ್ತಿದ್ದ..... ಚಕ್ರವರ್ತಿಯನ್ನು ಕಂಡು ಭಯಗೊಂಡ ಆದಿವಾಸಿಯು "ದೊರೆಯೇ ಹಸಿವನ್ನು ತಾಳಲಾರದೆ ನೀನು ಹೊಡೆದುರುಳಿಸಿದ ಸೈನಿಕನ ಹೆಣವನ್ನು ತಿನ್ನುತಿದ್ದೇನೆ. ಇದು ನಿನ್ನ ಆಹಾರ ನಿನ್ನ ಅಪ್ಪಣೆ ಇಲ್ಲದೆ ತಿನ್ನುತಿದ್ದೇನೆ ಕ್ಷಮಿಸು" ಎಂದ.. ಅದಕ್ಕೆ ಚಕ್ರವರ್ತಿಯು "ನಾನು ನರಮಾಂಸ ಭಕ್ಷಕನಲ್ಲ" ಎಂದ. ಆಗ ಆದಿವಾಸಿ ಹೇಳುತ್ತಾನೆ "ನೀನು ನರಮಾಂಸ ಭಕ್ಷಕನಲ್ಲ ಎಂದ ಮೇಲೆ ಇಷ್ಟೆಲ್ಲ ಮನುಷ್ಯರನ್ನು ಏಕೆ ಕೊಂದೆ? ನಾನು ಹಸಿವಾದಾಗ ಮಾತ್ರ ಅನಿವಾರ್ಯವಾದರೆ ಕೊಲ್ಲುತ್ತೇನೆ".
(ದೇವನೂರು ರವರ ಇಂತಹ ಕಥೆಗಳು ನಿಜಕ್ಕೂ ಮನುಷ್ಯನನ್ನು ಚಿಂತನಾಲೋಕಕ್ಕೆ ಕೊಂಡೊಯ್ಯದಿರಲಾರವು....)
Shared in Facebook