For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ವ್ಯಕ್ತಿ ಯ ಮನ್ನಣೆ

ವ್ಯಕ್ತಿಯ ಮಣ್ಣನೆ

ಸರಕಾರಿ ರಂಗದ ಇಲ್ಲವೇ ಖಾಸಗಿ ಸೇವಾ ರಂಗದ ಉದ್ಯೋಗಗಳಿಗೆ ಸುಯೋಗ್ಯ ವ್ಯಕ್ತಿಗಳನ್ನು ಆರಿಸಿಕೊಳ್ಳುವುದಕ್ಕಾಗಿ ನಾಡಿನಾದ್ಯಂತ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿ ಅರ್ಜಿಗಳನ್ನು ಆಹ್ವಾನಿಸುತ್ತಾರೆ. ಆಗ ನಿರುದ್ಯೋಗಿಗಳೂ, ಉತ್ತಮ-ಉದ್ಯೋಗಾಕಾಂಕ್ಷಿಗಳೂ ಸಾಕಷ್ಟು ಅರ್ಜಿಗಳನ್ನು ಹಾಕುತ್ತಾರೆ. ಅಂತಹ ಉಮೇದುವಾರರನ್ನು ಆಯ್ಕೆ ಮಾಡುವುದಕ್ಕಾಗಿ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಗಳೆರಡನ್ನೂ ನಡೆಸಲಾಗುತ್ತದೆ. ಹಾಗೆ ಪರೀಕ್ಷೆಗಳನ್ನು ನಡೆಸುವಾಗ, ಸುಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅರ್ಹತೆಗಳೇನು? ಎಂಬುದನ್ನು ನಿರೂಪಿಸುವ ಒಂದು ಉದಾಹರಣೆಯ ಪ್ರಸಂಗ ಇಲ್ಲಿದೆ. ಒಂದು ಸುಪ್ರಸಿದ್ಧ ಖಾಸಗಿ ರಂಗದ ವಾಣಿಜ್ಯ ಸಂಸ್ಥೆಯಲ್ಲಿ ಉನ್ನತ ಹುದ್ದೆಗಾಗಿ ಸುಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲೆಂದು ಲಿಖಿತ ಪರೀಕ್ಷೆಯ ಬಳಿಕ, ಅಂತಿಮ ಸಂದರ್ಶನದ ಪರೀಕ್ಷೆಗಾಗಿ 50 ಮಂದಿಯನ್ನು ಕರೆಯಲಾಗಿತ್ತು. ಸ್ವತಃ ಕಂಪನಿಯ ಅಧ್ಯಕ್ಷ ರು ಮತ್ತು ಆಡಳಿತ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮಿತ್ರರೊಬ್ಬರು ಪರೀಕ್ಷ ಕರಾಗಿದ್ದರು. ಅನೇಕ ಮಂದಿ ಸಂದರ್ಶನದ ಸಂದರ್ಭ ದೊಡ್ಡ-ದೊಡ್ಡ ತಜ್ಞ ಅಧಿಕಾರಿಗಳಿಂದ, ರಾಜಕೀಯ ಪುಢಾರಿಗಳಿಂದ ಶಿಫಾರಸು ಪತ್ರಗಳನ್ನು ತಂದು ಪ್ರಭಾವ ಬೀರಲೆಂದು ಪ್ರಯತ್ನ ನಡೆಸಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಸಂದರ್ಶನ, ಪರೀಕ್ಷೆಯ ಬಳಿಕ ಒಬ್ಬ ಸರಳ, ಸಜ್ಜನಿಕೆಯ ಕ್ರಿಯಾಶೀಲ ತರುಣನ ಆಯ್ಕೆ ನಡೆಯಿತು. ವೈಭವ, ಆಡಂಬರದ ವೇಷಭೂಷಣ, ಶಿಫಾರಸು ಪತ್ರದವರನ್ನು ತಿರಸ್ಕರಿಸಲಾಯಿತು. ಕಾರಣವೇನೆಂದು ವಿಚಾರಿಸಿದಾಗ ಕಂಪನಿಯ ಅಧ್ಯಕ್ಷ ರು ಸ್ವತಃ ಆಡಳಿತ ವಿಜ್ಞಾನದ ತಜ್ಞರಾಗಿದ್ದು, ಕಾರಣ ವಿಷದಪಡಿಸಿದರು. 'ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸುವಾಗ ಅಲ್ಲಿದ್ದ ಡೋರ್‌ ಮ್ಯಾಟ್‌ನಲ್ಲಿ ಕಾಲು ಒರೆಸಿಕೊಂಡು ಆತ ಒಳಗೆ ಬಂದ. ಇನ್ನೊಬ್ಬ ಉಮೇದುವಾರನಿಗೆ ತನ್ನ ಪಕ್ಕದಲ್ಲೇ ಕುಳಿತುಕೊಳ್ಳಲು ಅವಕಾಶವಿತ್ತ. ಫ್ಯಾನಿನ ಗಾಳಿಗೆ ಮೇಜಿನ ಮೇಲಿನ ಹೂದಾನಿ ಕೆಳಗೆ ಬಿದ್ದಾಗ, ಉಳಿದವರೆಲ್ಲರೂ ಸುಮ್ಮನಿದ್ದರೆ, ಈತ ಅದನ್ನೆತ್ತಿ ಮೇಜಿನ ಮೇಲಿರಿಸಿದ. ನೂರಾರು ಶಿಫಾರಸು ಪತ್ರ ತಂದವರೆಲ್ಲರೂ ಸುಮ್ಮನಿದ್ದರು. ಅವನ ಸಭ್ಯತೆ, ಸದಾಚಾರ ಅವನ ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ಹತ್ತೇ ಮಿನಿಟುಗಳಲ್ಲಿ ಗುರುತಿಸಿಬಿಟ್ಟಿದ್ದೆ. ಹಾಗಾಗಿ ಆತನೇ ಆಯ್ಕೆಗೆ ಅರ್ಹನೆನಿಸಿದ್ದ' ಎಂದು ನುಡಿದರು. ಪದವಿ, ಪಾಂಡಿತ್ಯ, ವಿದ್ವತ್ತು, ಶಿಫಾರಸು ಪತ್ರಗಳಿದ್ದರೂ ಸರಳತೆ, ಸೌಜನ್ಯ, ಮಾನವೀಯತೆಗಳ ಅಭಾವದಿಂದಾಗಿ ಕೆಲವೊಮ್ಮೆ ಜನರು ಹಿಂದೆ ಬೀಳುತ್ತಾರೆ. ಸಾಕಷ್ಟು ಪ್ರತಿಭೆ, ಕ್ರಿಯಾಶೀಲತೆ, ಪಾಂಡಿತ್ಯಗಳ ಜತೆಗೆ ಮಾನವೀಯತೆ, ಸೌಜನ್ಯಗಳಿದ್ದರೆ ಸುಂದರ ಕುಸುಮಕ್ಕೆ ಸುಗಂಧ ಬಂದಂತೆ ವ್ಯಕ್ತಿಯು ಮನ್ನಣೆ ಪಡೆಯುತ್ತಾನೆ. -ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com