ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟೀಷ ಆಳ್ವಿಕೆಗೆ ಪ್ರತಿರೋಧಗಳು
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮೈಸೂರು ಯುದ್ದವು ಹೈದರಾಲಿ ಮತ್ತು ಬ್ರಿಟೀಷರ ನಡುವೆ ನಡೆಯಿತು
2. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು
3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದ್ದಿದಳು
4. ಕಿತ್ತೂರು ಸಂಸ್ಥಾನದ ರಾಯಣ್ಣನ ಊರು ಸಂಗೊಳ್ಳಿ
5. ಸುರಪುವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ
6. ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ಬ್ರಿಟೀಷರ ವಿರುದ್ದ ದಂಗೆಯೆದ್ದಿದ್ದರು
7. ಅಮರ ಸುಳ್ಯ ಬಂಡಾಯವು ಮೂಲತ ರೈತರ ಬಂಡಾಯ
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಹೈದರಾಲಿ ಹೇಗೆ ಅಧೀಕಾರಕ್ಕೆ ಬಂದನು?
2. ಎರಡನೇ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳೇನು?
3. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಾವುವು?
4. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಬ್ರಿಟೀಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು. ಸಮರ್ಥಿಸಿ
5. ದೋಂಡಿಯ ವಾಘನು ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇ ಷಿಸಿ
6. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ.
7. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ.
8. ಸುರಪುದ ದಂಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮೈಸೂರು ಯುದ್ದವು ಹೈದರಾಲಿ ಮತ್ತು ಬ್ರಿಟೀಷರ ನಡುವೆ ನಡೆಯಿತು
2. ಎರಡನೇ ಆಂಗ್ಲೋ-ಮೈಸೂರು ಯುದ್ಧವು ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು
3. ಕಿತ್ತೂರು ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದ್ದಿದಳು
4. ಕಿತ್ತೂರು ಸಂಸ್ಥಾನದ ರಾಯಣ್ಣನ ಊರು ಸಂಗೊಳ್ಳಿ
5. ಸುರಪುವು ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ
6. ಈಗಿನ ಬಾಗಲಕೋಟೆ ಜಿಲ್ಲೆಯ ಹಲಗಲಿಯ ಬೇಡರು ಬ್ರಿಟೀಷರ ವಿರುದ್ದ ದಂಗೆಯೆದ್ದಿದ್ದರು
7. ಅಮರ ಸುಳ್ಯ ಬಂಡಾಯವು ಮೂಲತ ರೈತರ ಬಂಡಾಯ
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಹೈದರಾಲಿ ಹೇಗೆ ಅಧೀಕಾರಕ್ಕೆ ಬಂದನು?
- ಹೈದರಾಲಿಯು ಮೈಸೂರು ಸೇನೆಗೆ ಸೇರ್ಪಡೆಗೊಂಡನು
- ದೇವನಹಳ್ಳಿ ಕೋಟೆಯ ಧಾಳಿಯಲ್ಲಿ ಹೈದರಾಲಿಯು ವೀರಾವೇಷದಿಂದ ಹೋರಾಡಿ ಪ್ರಸಿದ್ಧಿಗೆ ಬಂದನು
- ಆರ್ಕಾಟಿನ ನಿಜಾಮನ ಮೇಲೆ ಯಶಸ್ವಿ ಧಾಳಿ ನಡೆಸಿದನು
- ಸೈನಿಕರ ಮನಸನ್ನು ಗೆದ್ದು ದಳಾವಯಿಗಳನ್ನು ಬದಿಗೊತ್ತಿ ನವಾಬ ಹೈದರಾಲಿಯಾದನು
- ಕೃಷ್ಣರಾಜ ಒಡೆಯರ ಅಸಮರ್ಥತೆಯು ಹೈದರಾಲಿ ಏಳಿಗೆಗೆ ಬರಲು ಸಹಾಯಕವಾಯಿತು
2. ಎರಡನೇ ಆಂಗ್ಲೋ-ಮೈಸೂರು ಯುದ್ಧದಿಂದ ಉಂಟಾದ ಪರಿಣಾಮಗಳೇನು?
- ಖಾಯಿಲೆಯಿಂದಾಗಿ ಹೈದರಾಲಿಯು ಮರಣ ಹೊಂದಿದನು
- ಯುದ್ದವನ್ನು ಮುನ್ನಡೆಸಿದ ಟಿಪ್ಪುವು ಮಂಗಳೂರು ಬಳಿ ಬ್ರಿಟೀಷರನ್ನು ಸೋಲಿಸಿದನು
- ಬ್ರಿಟೀಷರು ಹಾಗೂ ಟಿಪ್ಪು ಮಂಗಳೂರು ಒಪ್ಪಂದಕ್ಕೆ ಸಹಿ ಹಾಕಿದರು
- ಬ್ರಿಟೀಷರು ಟಿಪ್ಪುವಿಗೆ ಮಂಗಳೂರನ್ನು ಬಿಟ್ಟುಕೊಟ್ಟರು
3. ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳಾವುವು?
- ಇದರ ಪರಿಣಾಮವಾಗಿ ತನ್ನ ಅರ್ಧರಾಜ್ಯವನ್ನು ಬ್ರಿಟಿಷರಿಗೆ ನೀಡಬೇಕಾಯಿತು
- 3 ಕೋಟಿ ರೂಪಾಯಿಗಳನ್ನು ಯುದ್ಧ ಪರಿಹಾರವಾಗಿ ನೀಡಬೇಕಾಯಿತು
- ಹಣ ಸಂದಾಯವಾಗುವವರೆಗು ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡಬೇಕಾಯಿತು.
- ಯುದ್ಧಖೈದಿಗಳನ್ನು ಯಾವುದೇ ಷರತ್ತು ಇಲ್ಲದೇ ಬಿಡುಗಡೆಮಾಡಬೇಕಾಯಿತು
- ಬ್ರಿಟೀಷರು ಶ್ರೀರಂಗಪಟ್ಟಣದಿಂದ ತಮ್ಮ ಸೈನ್ಯವನು ಹಿಂದಕ್ಕೆ ಪಡೆದರು
4. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಬ್ರಿಟೀಷರನ್ನು ಮೈಸೂರು ಪ್ರಾಂತ್ಯದಲ್ಲಿ ಭದ್ರಗೊಳಿಸಿತು. ಸಮರ್ಥಿಸಿ
- ಈ ಯುದ್ಧದಲ್ಲಿ ಬ್ರಿಟೀಷರು ಟಿಪ್ಪುವನ್ನು ಕೊಂದರು
- ಸಾಮ್ರಾಜ್ಯವನ್ನು ಬ್ರಿಟೀಷರು, ಮರಾಠರು ಹಾಗೂ ನಿಜಾಮರು ಪರಸ್ಪರ ಹಂಚಿಕೊಂಡರು
- ಸಣ್ಣ ಪ್ರಾಂತ್ಯವನ್ನು ಮೈಸೂರು ಒಡೆಯರಿಗೆ ಹಿಂದರುಗಿಸಲಾಯಿತು
- ಬ್ರಿಟೀಷರ ಸಹಾಯಕ ಸೈನ್ಯಪದ್ಧತಿಗೆ ಮೈಸೂರು ಒಡೆಯರು ಸಹಿಹಾಕಿದರು
5. ದೋಂಡಿಯ ವಾಘನು ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿಶ್ಲೇ ಷಿಸಿ
- ದೊಂಡಿಯ ವಾಘನು ತನ್ನದೇ ಆದ ಖಾಸಗಿ ಸೈನ್ಯವನ್ನು ಹೊಂದಿದ್ಧನು
- ಕುಡಲೂರು ಕೋಟೆಯ ಮೇಲೆ ಧಾಳಿ ಮಾಡುವ ಪ್ರಯತ್ನ ಮಾಡಿದನು
- ಶಿವಮೊಗ್ಗ ಹಾಗೂ ಚಿತ್ರದುರ್ಗ ಕೋಟೆಗಳ ಮೇಲೂ ಧಾಳಿ ಮಾಡಿದನು
- ಬ್ರಿಟೀಷರ ವಿರುದ್ಧ ಹೊರಾಡಲು ಪಾಳೆಯಗಾರರು ವಾಘನಿಗೆ ಬೆಂಬಲ ನೀಡಿದರು
- ಪ್ರೆಂಚ್ ರ ನೆರವನ್ನು ಸಹ ವಾಘ ಪಡೆದುಕೊಂಡನು
6. ಸಂಗೊಳ್ಳಿ ರಾಯಣ್ಣನು ಸ್ವಾತಂತ್ರ ಹೋರಾಟದಲ್ಲಿ ಹೋರಾಡಿದ ಕ್ರಮವನ್ನು ವಿವರಿಸಿ.
- ರಾಯಣ್ಣನು ತನ್ನದೇ ಆದ ಸೈನ್ಯವನ್ನು ಸಂಘಟಿಸಿದನು
- ರಹಸ್ಯ ಸಭೇಗಳನ್ನು ಆಯೋಜಿಸಿ ಯೋಜನೆ ರೂಪಿಸಿಕೊಂಡರು
- ಸೈನ್ಯದಲ್ಲಿ ರಾಷ್ಟ್ರೀಯ ಭಾವನೆಯನ್ನು ಬೆಳೆಸಿದನು
- ಬ್ರಿಟೀಷರ ಖಜಾನೆ ತಾಲ್ಲೂಕು ಕಛೇರಿಗಳನ್ನು ಲೂಟಿ ಮಾಡಿದನು
7. ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪ್ರಾಂತ್ಯದ ಪುಟ್ಟಬಸಪ್ಪನ ಪಾತ್ರವನ್ನು ವಿವರಿಸಿ.
- ಪುಟ್ಟಬಸಪ್ಪನು ‘ಕಲ್ಯಾಣ ಸ್ವಾಮಿ’ ಹಾಗೂ ‘´ಸ್ವಾಮಿ ಅಪರಂಪರ’ ಎಂದೇ ಪರಿಚಿತರಾಗಿದ್ದರು
- ದಂಗೆಕೋರರನ್ನು ಪುಟ್ಟಬಸಪ್ಪನು ಸಂಘಟಿಸಿದನು
- ತಂಬಾಕು ಹಾಗೂ ಉಪ್ಪಿನ ಮೇಲಿನ ತೆರಿಗೆಯನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದನು
- ಬಳ್ಳಾರಿಯ ಸರ್ಕಾರಿ ಕಛೇರಿಯನ್ನು ಲೂಟಿಮಾಡಿದನು
- ಅಮಲ್ದಾರನೊಬ್ಬನನ್ನು ಕೊಂದು ಭಂಟ್ವಾಳದ ಖಜಾನೆ ಹಾಗೂ ಸೆರೆಮನೆಯನ್ನು ಲೂಟಿಮಾಡಿದನು
8. ಸುರಪುದ ದಂಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿ
- 1857ರ ದಂಗೆಯ ಸಮಯದಲ್ಲಿ ವೆಂಕಟಪ್ಪ ನಾಯಕನು ಸುರಪುರ ದಂಗೆಯನ್ನು ಪ್ರಾರಂಭಿಸಿದನು
- ನಾನಾ ಸಾಹೇಬನ ಪ್ರತಿನಿಧಿಗಳು ವೆಂಕಟಪ್ಪ ನಾಯಕನ ದಂಗೆಯನ್ನು ಬೆಂಬಲಿಸಿದರು
- ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಅನುಮಾನದಿಂದ ನೋಡಿದರು
- ವೆಂಕಟಪ್ಪ ನಾಯಕ ಕುರಿತು ವರದಿ ನೀಡಲು ಕ್ಯಾಂಪ್ಬೆಲ್ ಎಂಬ ಅಧಿಕಾರಿಯನ್ನು ನೇಮಿಸಲಾಯಿತು
- ಹೈದರಾಬಾದಿನ ರೆಸಿಡೆಂಟನಿಗೆ ನೀಡಿದ ವರದಿಯಲ್ಲಿ ಸುರಪುದ ದುರಾಡಳಿತಕ್ಕೆ ವೆಂಕಟಪ್ಪ ಕಾರಣವೆಂದು ತಿಳಿಸಲಾಯಿತು
- ಬ್ರಿಟೀಷರು ವೆಂಕಟಪ್ಪ ನಾಯಕನನ್ನು ಅಧೀಕಾರದಿಂದ ಕೆಳಗಿಳಿಸಿದರು
No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you