ಅಧ್ಯಾಯ -6 ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ (1857)
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 1857ರ ದಂಗೆಯನ್ನು ಬ್ರಿಟಿಷ ಇತಿಹಾಸಕಾರರು ಸಿಪಾಯಿದಂಗೆ ಎಂದು ಕರೆದಿದ್ದಾರೆ
2. ಡಾಲ್ಹೌಸಿಯು ಜಾರಿಗೆ ತಂದ ನೀತಿ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
3. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ ಅಧಿಕಾರಿಯನ್ನು ಕೊಂದವನು ಮಂಗಲ ಪಾಂಡೆ
4. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ದದ ಯುದ್ಧದಲ್ಲಿ ಗ್ವಾಲೀಯರನ್ನು ವಶಕ್ಕೆ ಪಡೆದಳು
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದಾದ ಪರಿಣಾಮಗಳಾವುವು? ವಿಶ್ಲೇಷಿಸಿ
2. 1857ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ವಿವರಿಸಿ
3. 1857ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು?
4. ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ತತ್ಕ್ಷಣದ ಕಾರಣಗಳಾವುವು?
5. 1857 ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿಮಾಡಿ
6. 1857 ರ ದಂಗೆಯ ಪರಿಣಾಮಗಳನ್ನು ಪಟ್ಟಿಮಾಡಿ
7. ’1858 ರ ಬ್ರಿಟನ್ನಿನ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?
8. 1857ರ ದಂಗೆಯ ಕಾರಣಗಳನ್ನು ಪಟ್ಟಿಮಾಡಿ. ಒಂದನ್ನು ವಿವರಿಸಿ
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 1857ರ ದಂಗೆಯನ್ನು ಬ್ರಿಟಿಷ ಇತಿಹಾಸಕಾರರು ಸಿಪಾಯಿದಂಗೆ ಎಂದು ಕರೆದಿದ್ದಾರೆ
2. ಡಾಲ್ಹೌಸಿಯು ಜಾರಿಗೆ ತಂದ ನೀತಿ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
3. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ ಅಧಿಕಾರಿಯನ್ನು ಕೊಂದವನು ಮಂಗಲ ಪಾಂಡೆ
4. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ದದ ಯುದ್ಧದಲ್ಲಿ ಗ್ವಾಲೀಯರನ್ನು ವಶಕ್ಕೆ ಪಡೆದಳು
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದಾದ ಪರಿಣಾಮಗಳಾವುವು? ವಿಶ್ಲೇಷಿಸಿ
- ದೇಶಿಯ ಸಂಸ್ಥಾನಗಳು ತಮ್ಮ ಅಸ್ಥಿತ್ವಗಳನ್ನು ಕಳೆದುಕೊಂಡವು
- ಸತಾರ, ಜೈಪುರ ಹಾಗೂ ಝಾನ್ಸಿಗಳು ಬ್ರಿಟಿಷರ ವಶವಾದವು
- ತಂಜಾವೂರು ಹಾಗೂ ಕರ್ನಾಟಿಕ್ ನವಾಬರಿಗಿದ್ದ ರಾಜಪದವಿಗಳು ರದ್ಧಾದವು
- ಮೊಘಲ್ ಚಕ್ರವರ್ತಿಯನ್ನು ಪದಚ್ಯುತಗೊಳಿಸಿದರು
- ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು
- 1857ರ ದಂಗೆಗೆ ಪ್ರೇರಣೆಯನ್ನು ನೀಡಿತು
2. 1857ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ವಿವರಿಸಿ
- ಇಂಗ್ಲೇಂಡಿನ ಕೈಗಾರಿಕಾ ಕ್ರಾಂತಿಯಿಂದ ಭಾರತದ ಕೈಗಾರಿಕೆಗಳು ನಶಿಸಿದವು
- ಭಾರತವು ಇಂಗ್ಲೇಂಡಿಗೆ ಕಚ್ಚಾ ಸಾಮಾಗ್ರಿಗಳನ್ನು ಪೂರೈಸುವ ದೇಶವಾಯಿತು
- ಇಂಗ್ಲೇಂಡಿನ ಸಿದ್ಧವಸ್ತುಗಳನ್ನು ಮಾರುವ ಮಾರುಕಟ್ಟೆಯಾಗಿ ಭಾರತವನ್ನು ಬಳಸಿಕೊಂಡರು
- ಲಕ್ಷಾಂತರ ಜನರು ನಿರುದ್ಯೋಗಿಗಳಾದರು
- ಭಾರತೀಯ ಸರಕಿನ ಮೇಲೆ ದುಬಾರಿ ಸುಂಕಗಳನ್ನು ಹೇರಲಾಯಿತು
- ಇನಾಂ ಕಮೀಷನ್ ಮೂಲಕ ಕೊಡುಗೆ ಭೂಮಿಗಳನ್ನು ಹಿಂಪಡೆದರು
- ಜಮಿನ್ಧಾರರು ರೈತರನ್ನು ಶೋಷಣೆ ಮಾಡಿದರು
3. 1857ರ ದಂಗೆಯಲ್ಲಿ ಸೈನಿಕರ ಧಾರ್ಮಿಕ ಮನೋಭಾವವನ್ನು ಪ್ರಚೋದಿಸಿದ ಅಂಶಗಳಾವುವು?
- ಸೈನಿಕರನ್ನು ಸಾಗರದಾಚೆಗಿನ ಸೇವೆಗೆ ಒತ್ತಾಯ ಪಡಿಸಲಾಯಿತು
- ರಾಯಲ್ ಎನ್ಫೀಲ್ಡ್ ಬಂದೂಕಿನ ತುಪಾಕಿಗಳಿಗೆ ಹಂದಿ ಮತ್ತು ದನದ ಕೊಬ್ಬನ್ನು ಲೇಪಿಸಲಾಗಿತ್ತು
4. ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ತತ್ಕ್ಷಣದ ಕಾರಣಗಳಾವುವು?
- ಬ್ರಿಟಿಷರು ಹೊಸ ಮಾದರಿಯ ರಾಯಲ್ ಎನ್ಫೀಲ್ಡ್ ಬಂದೂಕುಗಳನ್ನು ಪರಿಚಯಿಸಿದರು.
- ಈ ಬಂದೂಕಿನ ತುಪಾಕಿಗಳಿಗೆ ಹಂದಿ ಮತ್ತು ದನದ ಕೊಬ್ಬನ್ನು ಲೇಪಿಸಲಾಗಿತ್ತು,
- ಇದನ್ನು ಬಳಸಲು ಸೈನಿಕರಿಗೆ ಒತ್ತಾಯ ಪಡಿಸಿದ್ದರಿಂದ ದಂಗೆ ಸ್ಪೋಟಗೊಂಡಿತು.
5. 1857 ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿಮಾಡಿ
- ಇದು ದೇಶದಾದ್ಯಂತ ವ್ಯಾಪಿಸಿರಲಿಲ್ಲ
- ಕೆಲವರ ವೈಯುಕ್ತಿಕ ಕಾರಣಗಳ ಈಡೇರಿಕೆಗಾಗಿ ದಂಗೆ ಸಂಭವಿಸಿತು
- ಸಂಘಟನೆಯ ಕೊರತೆಯು ಹೆಚ್ಚಾಗಿತ್ತು
- ಭಾರತೀಯ ಸೈನಿಕರಲ್ಲಿ ಒಗ್ಗಟ್ಟಿನ ಕೊರತೆ ಇತ್ತು
- ದಂಗೆಯು ಸೂಕ್ತ ನಿರ್ದೇಶನ ಹಾಗೂ ನಾಯಕತ್ವದ ಕೊರತೆಯನ್ನು ಹೊಂದಿತ್ತು
- ಬ್ರಿಟಿಷರು ಆಧುನಿಕ ಶಸ್ರ್ತಾಸ್ರ್ತಗಳನ್ನು ಪರಿಣಾಮಕಾರಿಯಾಗಿ ಬಳಸಿದರು
- ದೇಶಿಯ ರಾಜರು ಬ್ರಿಟಿಷರಿಗೆ ನಿಷ್ಟರಾಗಿ ಉಳಿದುಕೊಂಡರು
- ಭಾರತೀಯ ಸಿಪಾಯಿಗಳು ಆಧುನಿಕ ಶಸ್ರ್ತಾಸ್ರ್ತಗಳ ಕೊರತೆ ಹೊಂದಿದ್ದರು
6. 1857 ರ ದಂಗೆಯ ಪರಿಣಾಮಗಳನ್ನು ಪಟ್ಟಿಮಾಡಿ
- ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯು ಅಂತ್ಯಗೊಂಡಿತು
- ಭಾರತದ ಆಳ್ವಿಕೆಯು ಬ್ರಿಟ್ಟನ್ನಿನ ರಾಣಿಯ ನಿಯಂತ್ರಣಕ್ಕೆ ಒಳಪಟ್ಟಿತು
- ರಾಣಿಯು ಭಾರತದ ಆಡಳಿತದ ಜವಾಬ್ದಾರಿಯನ್ನು ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ವಹಿಸಿದಳು
- 1858 ರಲ್ಲಿ ‚ವಿರಿಯಾ ರಾಣಿಯ ಘೋಷಣೆ’ಗಳು ಜಾರಿಗೆ ಬಂದವು
- ಮುಂದಿನ ಸ್ವಾತಂತ್ರಹೋರಾಟಕ್ಕೆ ಹೊಸ ಸ್ಪೂರ್ತಿಯನ್ನು ನೀಡಿತು
- ಭಾರತೀಯರ ಬೆಂಬಲವಿಲ್ಲದೆ ಶಾಂತಿಯುತ ಆಳ್ವಿಕೆ ಸಾದ್ಯವಿಲ್ಲವೆಂದು ಬ್ರಿಟೀಷರು ಅರಿತರು
- ರಾಣಿಯು ‘ದತ್ತು ಮಕ್ಕಳಿಗೆ ಉತ್ತರಾಧಿಕಾರತ್ವದ ಹಕ್ಕಿಲ್ಲ ನೀಯಮ ರದ್ದು
7. ’1858 ರ ಬ್ರಿಟನ್ನಿನ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?
- ಈಸ್ಟ್ ಇಂಡಿಯಾ ಕಂಪನಿ ಭಾರತೀಯ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು
- ಮುಂದುವರಿಸಲಾಯಿತು
- ಭಾರತೀಯರಿಗೆ ಸ್ಥಿರ ಹಾಗೂ ಸುಭದ್ರ ಸರ್ಕಾರದ ಭರವಸೆಯನ್ನು ನೀಡಲಾಯಿತು
- ಕಾನೂನಿನನ್ವಯ ಎಲ್ಲರಿಗೂ ಸಮಾನತೆ ನೀಡಲಾಯಿತು
- ಧಾರ್ಮಿಕ ಸಾಮರಸ್ಯ ಸ್ಥಾಪಿಸುವ ಭರವಸೆ ನೀಡಲಾಯಿತು
- ಭಾರತೀಯರ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ಭರವಸೆ ನೀಡಿದರು
- ‘ದತ್ತು ಮಕ್ಕಳಿಗೆ ಉತ್ತರಾಧಿಕಾರತ್ವದ ಹಕ್ಕಿಲ್ಲ ನೀಯಮ ರದ್ದು
8. 1857ರ ದಂಗೆಯ ಕಾರಣಗಳನ್ನು ಪಟ್ಟಿಮಾಡಿ. ಒಂದನ್ನು ವಿವರಿಸಿ
- ರಾಜಕೀಯ ಕಾರಣಗಳು
- ಆರ್ಥಿಕ ಕಾರಣಗಳು
- ಸಾಮಾಜಿಕ ಕಾರಣಗಳು
- ಆಡಳಿತಾತ್ಮಕ ಕಾರಣಗಳು
- ಸೈನಿಕ ಕಾರಣಗಳು
- ತತ್ಕ್ಷಣದ ಕಾರಣಗಳು
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ರದ್ದತಿ, ಬಗ್ಗೆ ಇನ್ನೊಮ್ಮೆ ಪರಿಶೀಲಿಸಿ ಸರ್. 1857 ದಂಗೆಯ ಪರಿಣಾಮಗಳಲ್ಲಿ.
ReplyDelete1857ರ ಕ್ರಾಂತಿಗೆ ಕಾರಣವಾದ ಅಂಶಗಳನ್ನು ವಿವರಿಸಿ.
DeleteSir/mam ninvu confuse madta eddira once Weston annu 2 satti
ReplyDelete