For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ರಜಪೂತರು

6) ರಜಪೂತರ ಕೊನೆಯ ದೊರೆ ಯಾರು?
A). ಮೊದಲನೇ ಪೃಥ್ವಿರಾಜ್ ಚೌಹಾಣ
B). ಬೋಜರಾಜ
C). ಗುಹದತ್ತ
D). ಮೂರನೇ ಪೃಥ್ವಿರಾಜ್ ಚೌಹಾಣ

orrect Ans: (D)


ಇತಿಹಾಸ ಪ್ರಸಿದ್ಧ ಕಾಳಗವಾದ ಎರಡನೇ ತರೈನ್ ಯುದ್ದದಲ್ಲಿ ಪೃಥ್ವಿರಾಜನ ಮರಣದೊಂದಿಗೆ ರಜಪೂತರ ಆಳ್ವಿಕೆ ಮುಕ್ತಾಯವಾಯಿತು. ರಜಪೂತರ ಕೊನೆಯ ದೊರೆ 3 ನೆ ಪೃಥ್ವಿರಾಜ್ ಚೌಹಾಣನಾಗಿದ್ದಾನೆ.


7) ಎರಡನೇಯ ತರೈನ್ ಯುದ್ಧದಲ್ಲಿ ಜಯಶಾಲಿಯಾದವರು ಯಾರು?
A). ಪೃಥ್ವಿರಾಜ್ ಚೌಹಾಣ್
B). ಮಹ್ಮದ್ ಘೋರಿ
C). ಮಹ್ಮದ್ ಘಜ್ನಿ
D). ಯಾರೂ ಅಲ್ಲ


Correct Ans: (B)


ಕ್ರಿ.ಶ 1192 ರಲ್ಲಿ ಪೃಥ್ವಿರಾಜ್ ಚೌಹಾಣ್ ಮತ್ತು ಘೋರಿಯ ನಡುವೆ ಈ ಯುದ್ಧವು ನಡೆಯಿತು. ಇಲ್ಲಿ ಈ ಯುದ್ಧದಲ್ಲಿ ಚೌಹಾಣನು ಸೋತು ಕೊಲ್ಲಲ್ಪಟ್ಟನು. ಹೀಗಾಗಿ ಮಹದ್ ಘೋರಿಯು ಜಯಶಾಲಿಯಾದನು.


8) ಮೊದಲನೆ ತರೈನ್ ಯುದ್ಧವು ಯಾರ ಮಧ್ಯೆ ನಡೆಯಿತು?
A). ಜಾಮೂರಿನ್ ಮತ್ತು ಮಹ್ಮದ್ ಘೋರಿಯ ನಡುವೆ
B). ಬಾಬರ್ ಮತ್ತು ಮಹ್ಮದ್ ಘೋರಿಯ ನಡುವೆ
C). ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘಜ್ನಿಯ ನಡುವೆ
D). ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ


Correct Ans: (D)


ಇದು ಕ್ರಿ.ಶ 1191 ರಲ್ಲಿ 3 ನೇ ಪೃಥ್ವಿರಾಜ್ ಚೌಹಾಣ್ ಮತ್ತು ಮಹ್ಮದ್ ಘೋರಿಯ ನಡುವೆ ನಡೆಯಿತು. ಈ ಯುದ್ಧದಲ್ಲಿ ದೆಹಲಿ ಮತ್ತು ಅಜ್ಮಿರ್ ರಾಜ್ಯಗಳ ದೊರೆಯಾಗಿದ್ದ ಪೃಥ್ವಿರಾಜ್ ಚೌಹಾಣ್ ನು ಘೋರಿಯನ್ನು ಸೋಲಿಸಿದನು.


9) ಪರ್ಷಿಯನ್ ಹೂಮರ್ ಎಂದು ಯಾರನ್ನು ಕರೆಯಲಾಗಿದೆ?
A). ಅಲ್ಬೆರೋನಿ
B). ಪಿರ್ದೌಸಿ
C). ಬಲ್ಬನ್
D). ಸೆಲ್ಯುಕಸ್


Correct Ans: (B)


ಪಿರ್ದೌಸಿಯ ಕೃತಿ "ಷಹನಾಮ" ಘಜ್ನಿ ಮಹ್ಮದ್ ನ ದಾಳಿಯ ಬಗ್ಗೆ ಮಾಹಿತಿ ನೀಡುತ್ತದೆ. ಪಿರ್ದೌಸಿಯನ್ನು ಪರ್ಷಿಯನ್ ಹೂಮರ್ ಎಂದು ಕರೆಯಲಾಗಿದೆ.


10) "ತಹ್ಕೀಕ್ ಇ ಹಿಂದ್" ಇದು ಯಾರ ಪ್ರಸಿದ್ಧ ಕೃತಿಯಾಗಿದೆ?
A). ಅಲ್ಬೆರೋನಿ
B). ಬಲ್ಬನ್
C). ಘಜ್ನಿ ಮಹ್ಮದ್
D). ಘೋರಿ ಮಹ್ಮದ್


Correct Ans: (A)


ಮಹ್ಮದ್ ಘಜ್ನಿಯು ಸೌರಾಷ್ಟ್ರ (ಗುಜರಾತ್)ದ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣ ನಾಶಮಾಡಿ ಅಪಾರ ಸಂಪತ್ತು ದೋಚಿ ಅಪಘಾನಿಸ್ತಾನದ ತನ್ನ ರಾಜ್ಯಕ್ಕೆ ಅಂದರೇ ಘಜ್ನಿಗೆ ಹೋದನು. ಇದರ ಬಗ್ಗೆ ಇತಿಹಾಸಕಾರ ಅಲ್ಬೆರೋನಿಯು ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಅಲ್ಬೆರೋನಿಯ ಪ್ರಸಿದ್ಧ ಕೃತಿ "ತಹ್ಕೀಕ್ ಇ ಹಿಂದ್" ಇದು ಘಜ್ನಿಯ ದಾಳಿಯ ಬಗ್ಗೆ ನಮಗೆ ತಿಳಿಸಿಕೊಡುತ್ತದೆ.


11) ಮಹ್ಮದ್ ಘೋರಿಯು ಯಾವ ಯುದ್ಧದಲ್ಲಿ ಸೋತನು?
A). ಮೊದಲನೇ ತರೈನ್ ಯುದ್ಧ
B). ಎರಡನೇ ತರೈನ್ ಯುದ್ಧ
C). ಮೂರನೇ ತರೈನ್ ಯುದ್ಧ
D). ಸೋತೇ ಇಲ್ಲ

Correct Ans: (A)

ಮೊದಲನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಕ್ರಿ.ಶ 1191 ರಲ್ಲಿ ಪೃಥ್ವಿರಾಜನಿಂದ ಸೋತನು. ನಂತರ ಕ್ರಿ.ಶ 1192 ರಲ್ಲಿ ಎರಡನೇ ತರೈನ್ ಯುದ್ಧದಲ್ಲಿ ಮಹ್ಮದ್ ಘೋರಿಯು ಪೃಥ್ವಿರಾಜನನ್ನು ಕೊಲೆ ಮಾಡಿದನು.


12) ಭಾರತದ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದ ವಿದೇಶಿಗ ಯಾರು?
A). ಮಹ್ಮದ್ ಘೋರಿ
B). ಮಹ್ಮದ್ ಘಜ್ನಿ
C). ಅಲ್ಬುಕರ್ಕ್
D). ಅಮೀರ್ ಹಸನ್

Correct Ans: (B)

ಮಹ್ಮದ್ ಘಜ್ನಿ ಅಫಘಾನಿಸ್ತಾನದ ನಾಯಕ. ಇವನು ಕ್ರಿ.ಶ 1000 ದಿಂದ 1026 ರವರೆಗೆ ಭಾರತದ ಮೇಲೆ ಹದಿನೇಳು ಬಾರಿ ಆಕ್ರಮಣ ಮಾಡಿದನು. ಇವನು 1025 ರಲ್ಲಿ ಭಾರತದ ಮೇಲೆ ಹದಿನಾರನೆಯ ದಾಳಿ ನಡೆಸಿದ್ದು ಗುಜರಾತಿನ ಸೋಮನಾಥ ದೇವಾಲಯದ ಮೇಲೆ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com