ಅಧ್ಯಾಯ -2 ಬ್ರಿಟೀಷ ಆಳ್ವಿಕೆಯ ವಿಸ್ತರಣೆ:
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಹಾಗೂ ಬ್ರಿಟೀಷರ ಮಧ್ಯೆ ಸಾಲ್ಬಾಯ್ ಒಪ್ಪಂದ ಆಯಿತು
2. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ್ ವೆಲ್ಲೆಸ್ಲಿ
4. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ್ ಡಾಲ್ಹೌಸಿ
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಮೊದಲನೇ ಆಂಗ್ಲೋ-ಮರಾಠ ಯುದ್ದದ ಕಾರಣಗಳನ್ನು ವಿವರಿಸಿ
2. ಸಹಾಯಕ ಸೈನ್ಯ ಪದ್ದತಿಯ ನಿಂಬಂಧನೆಗಳಾವುವು? ವಿವರಿಸಿ
3. ಮೂರನೇ ಆಂಗ್ಲೋ-ಮರಾಠ ಯುದ್ದವನ್ನು ವಿವರಿಸಿ
4. ಬ್ರಿಟೀಷ ಅಧಿಕಾರ ವಿಸ್ತರ್ಣೆ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯು ಹೇಗೆ ಸಹಕಾರಿಯಾಯಿತು ವಿವರಿಸಿ
5. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ಮೊದಲನೇ ಆಂಗ್ಲೋ-ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಹಾಗೂ ಬ್ರಿಟೀಷರ ಮಧ್ಯೆ ಸಾಲ್ಬಾಯ್ ಒಪ್ಪಂದ ಆಯಿತು
2. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ಲಾರ್ಡ್ ವೆಲ್ಲೆಸ್ಲಿ
4. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು ಲಾರ್ಡ್ ಡಾಲ್ಹೌಸಿ
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಮೊದಲನೇ ಆಂಗ್ಲೋ-ಮರಾಠ ಯುದ್ದದ ಕಾರಣಗಳನ್ನು ವಿವರಿಸಿ
- ರಘುನಾಥರಾಯನಿಂದ ಪೇಶ್ವೆ ನಾರಯಣರಾವ್ನ ಕೊಲೆ
- ಮರಾಠ ಒಕ್ಕೂಟದಿಂದ ಪೇಶ್ವೆ ಹುದ್ದೆಗೆ ಮಾದವರಾವ್ನ ನೇಮಕ
- ಇದರಿಂದ ವಿಚಲಿತನಾದ ರಘುನಾಥರಾಯನು ಬ್ರಿಟೀಷರ ನೆರವುಯಾಚಿಸಿದ್ದು
2. ಸಹಾಯಕ ಸೈನ್ಯ ಪದ್ದತಿಯ ನಿಂಬಂಧನೆಗಳಾವುವು? ವಿವರಿಸಿ
- ಈ ಪದ್ಧತಿಯ ಅನುಸಾರ ದೇಶಿಯ ರಾಜನು ಬ್ರಿಟಿಷರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು
- ದೇಶಿಯ ರಾಜರಿಗೆ ಬ್ರಿಟೀಷರು ಸೈನ್ಯವನ್ನು ನೀಡುತ್ತಿದ್ದರು
- ಬ್ರಿಟಿಷರ ಅನುಮತಿಯಿಲ್ಲದೆ ಈ ಸೈನ್ಯವನ್ನು ಬಳಸುವಂತಿರಲಿಲ್ಲ
- ಸೈನ್ಯ ವೆಚ್ಚವನ್ನು ದೇಶಿಯ ರಾಜರೇ ನೋಡಿಕೊಳ್ಳಬೇಕಾಗಿತ್ತು.
- ದೇಶಿಯ ರಾಜರ ಆಂಗ್ಲ್ ರೆಸಿಡೆಂಟ್ ಅಧಿಕಾರಿಯನ್ನು ಬ್ರಿಟಿಷರು ನೇಮಿಸುತ್ತಿದ್ದರು.
3. ಮೂರನೇ ಆಂಗ್ಲೋ-ಮರಾಠ ಯುದ್ದವನ್ನು ವಿವರಿಸಿ
- ಮೂರನೇ ಆಂಗ್ಲೋ-ಮರಾಠ ಯುದ್ದದಲ್ಲಿ ಪೇಶ್ವೇ ಎರಡನೇ ಬಾಜಿರಾಯನು ಪುಣೆಯಲ್ಲಿನ ಬ್ರಿಟೀಷ ರೆಸಿಡೆನ್ಸಿ ಮತ್ತು ಕೋರೆಗಾವ್ ಹಾಗೂ ಆಷ್ಟಿಗಳ ಮೇಲೆ ಧಾಳಿಮಾಡಿ ಸೋಲಿಸಲ್ಪಟ್ಟನು.
- ಇಂಗ್ಲೀಷರು ಪೇಶ್ವೆ ಹುದ್ದೆಯನ್ನು ರದ್ದು ಪಡಿಸಿದರಲ್ಲದೆ ಪೇಶ್ವೆ ಎರಡನೇ ಬಾಜಿರಾಯನಿಗೆ ವಿಶ್ರಾಂತಿ ವೇತನವನ್ನು ನೀಡಿದರು.
- ಶಿವಾಜಿಯ ವಂಶಸ್ಥ ಪ್ರತಾಪ್ಸಿಂಹನನ್ನು ಮರಾಠರ ಮುಖಂಡರಾಗಿ ನೇಮಿಸಿದರು
4. ಬ್ರಿಟೀಷ ಅಧಿಕಾರ ವಿಸ್ತರ್ಣೆ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯು ಹೇಗೆ ಸಹಕಾರಿಯಾಯಿತು ವಿವರಿಸಿ
- ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ವಯ ದೇಶಿಯ ರಾಜನಿಗೆ ಸ್ವಾಭಾವಿಕ ಮಕ್ಕಳು ಇಲ್ಲದಿದ್ದರೆ ಆತ ತನ್ನ ಸಾಮ್ರಾಜ್ಯವನ್ನು ದತ್ತು ಮಕ್ಕಳಿಗೆ ಹಸ್ತಾಂತರ ಮಾಡುವಂತಿರಲಿಲ್ಲ
- ಈ ನೀತಿಯ ಅನುಸಾರ ಸತಾರ, ಝಾನ್ಸಿ, ನಾಗಪುರ, ಜೈಪುರ, ಸಂಬಲ್ಪುರ, ಉದಯಪುರಗಳನ್ನು ಡಾಲ್ ಹೌಸಿ ವಶಪಡಿಸಿಕೊಂಡನು.
- ಈ ನೀತಿಯನ್ನು ಜಮೀನ್ದಾರರಿಗೂ ಅನ್ವಯಿಸಿದ್ದರಿಂದ ಜಮೀನ್ದಾರರು ತಮ್ಮ ಹಕ್ಕಗಳನ್ನು ಕಳೆದುಕೊಂಡರು,
- ಈ ನೀತಿಯು ರಾಜಕೀಯ ಅಸ್ರ್ತವಾಗಿ ಬಳಸಲ್ಪಟ್ಟಿತು
5. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?
- ಸತಾರ, ಝಾನ್ಸಿ, ನಾಗಪುರ, ಜೈಪುರ, ಸಂಬಲ್ಪುರ, ಉದಯಪುರಗಳು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾಗಿವೆ.
No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you