ಅಧ್ಯಾಯ -3 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು.
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯವನ್ನು ಸ್ಥಾಪಿಸಿದವನು ಲಾರ್ಡ್ ವಾರನ್ ಹೇಸ್ಟಿಂಗ್ಸ್
2. ಸೂಪರಿಡೆಂಟ್ಂಟ್ ಆಫ್ ಪೋಲೀಸ್ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ್ ಕಾರ್ನವಾಲೀಸ್
3. ಖಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ 1793 ರಲ್ಲಿ ಜಾರಿಗೆ ತರಲಾಯಿತು
4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ರೈತವಾರಿ ಪದ್ದತಿ
5. ಆಧುನಿಕ ಶಿಕಣ್ಷ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟೀಷ ಅಧಿಕಾರಿ ಲಾರ್ಡ್ ವಾರನ್ ಹೇಸ್ಟೀ ಂಗ್ಸ್
6. ರೇಗ್ಯೂಲೇಟಿಂಗ್ ಕಾಯಿದೆಯು ಜಾರಿಗೆ ಬಂದ ವರ್ಷ 1773
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟೀಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇ ಷಿಸಿ
2. ಬ್ರಿಟೀಷ ಕಾಲದಲ್ಲಿ ಪೋಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?
3. ಖಾಯಂ ಜಮೀನ್ದಾರಿ ಪದ್ದತಿಯು ರೈತರನ್ನು ‚ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿಸಿ, ಸಾಲದಲ್ಲೇ ಸಾಯುವಂತೆ ಮಾಡಿತು‛. ಹೇಗೆ? ವಿವರಿಸಿ
4. ರೈತವಾರಿ ಪದ್ದತಿಯು ಒಳಗೊಂಡ ಪ್ರಮುಖಾಂಶಗಳಾವುವು?
5. ಬ್ರಿಟೀಷ ಕಂದಾಯ ನೀತಿಗಳಿಂದಾದ ಪರಿಣಾಮಗಳಾವುವು?
6. ಬ್ರಿಟೀಷ ಶಿಕಣ ದಿಂದ ಉಂಟಾದ ಪರಿಣಾಮಗಳನ್ನು ಪಟ್ಟಿಮಾಡಿ
7. ರೆಗ್ಯೂಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?
8. 1858ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?
9. 1935ರ ಭಾರತ ಸರ್ಕಾರ ಕಾಯ್ದೆ ‚ಭಾರತ ಸಂವಿಧಾನದ ಬುನಾದಿ‛ ಸಮರ್ಥಿಸಿ
10. 1919ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?
I ಖಾಲಿಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. ದಿವಾನಿ ಅದಾಲತ್ ಎಂಬ ನಾಗರೀಕ ನ್ಯಾಯಾಲಯವನ್ನು ಸ್ಥಾಪಿಸಿದವನು ಲಾರ್ಡ್ ವಾರನ್ ಹೇಸ್ಟಿಂಗ್ಸ್
2. ಸೂಪರಿಡೆಂಟ್ಂಟ್ ಆಫ್ ಪೋಲೀಸ್ ಹುದ್ದೆಯನ್ನು ಸೃಷ್ಟಿಸಿದವನು ಲಾರ್ಡ್ ಕಾರ್ನವಾಲೀಸ್
3. ಖಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ 1793 ರಲ್ಲಿ ಜಾರಿಗೆ ತರಲಾಯಿತು
4. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ರೈತವಾರಿ ಪದ್ದತಿ
5. ಆಧುನಿಕ ಶಿಕಣ್ಷ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟೀಷ ಅಧಿಕಾರಿ ಲಾರ್ಡ್ ವಾರನ್ ಹೇಸ್ಟೀ ಂಗ್ಸ್
6. ರೇಗ್ಯೂಲೇಟಿಂಗ್ ಕಾಯಿದೆಯು ಜಾರಿಗೆ ಬಂದ ವರ್ಷ 1773
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟೀಷರು ರೂಪಿಸಿದ ನ್ಯಾಯಾಂಗ ವ್ಯವಸ್ಥೆಯನ್ನು ವಿಶ್ಲೇ ಷಿಸಿ
- ದಿವಾನಿ ಅದಾಲತ್:-ಇದು ನಾಗರೀಕ ನ್ಯಾಯಾಲಯವಾಗಿದ್ದು ಹಿಂದೂಗಳಿಗೆ ಹಿಂದೂ ಧರ್ಮಶಾಸ್ರ್ತದ ಪ್ರಕಾರ
- ಮುಸಲ್ಮಾನರಿಗೆ ಷರೀಯತ್ ಕಾನೂನಿನ ಪ್ರಕಾರ ನ್ಯಾಯ ತಿರ್ಮಾನ ಮಾಡಲಾಗುತ್ತಿತ್ತು.
- ಈ ನ್ಯಾಯಾಲುಗಳ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು
- ಫೌಜದಾರಿ ಅದಾಲ್:-ಇದು ಅಪರಾಧಿಕ ನ್ಯಾಯಾಯ ವಾಗಿದ್ದು ‘ಖಾಜಿ’ಗಸು ನ್ಯಾಯ ತೀರ್ಮಾನ ಮಾಡುತ್ತಿದ್ದರು.
- ಇದರ ಅಧ್ಯಕ್ಷತೆಯನ್ನು ಯೂರೋಪಿಯನ್ನವರೇ ವಹಿಸಿಕೊಳತ್ತಿದ್ದರು
2. ಬ್ರಿಟೀಷ ಕಾಲದಲ್ಲಿ ಪೋಲೀಸ್ ವ್ಯವಸ್ಥೆಯಲ್ಲಿ ತಂದಂತಹ ಸುಧಾರಣೆಗಳಾವುವು?
- ಪ್ರತೀ ಜಿಲ್ಲೆಗಳನ್ನು ಅನೇಕ ಪೋಲಿಸ್ ‘ಠಾಣೆ’ ಗಸನ್ನಾಗಿ ವಿಭಜಿಸಲಾಯಿತು
- ಪ್ರತೀ ಠಾಣೆಯ ಉಸ್ತುವಾರಿಗೆ ‘ಕೊತ್ವಾಲ’ ರನ್ನು ನೇಮಿಸಲಾಯಿತು
- ಪೋಲೀಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ರ ಅಧೀನಕೊಳ್ಳಪಟ್ಟರು
- 1902 ರಲ್ಲಿ ‘ಪೋಲಿಸ್ ಕಮಿಶನ್ ಕಾಯ್ದೆ’ಯನ್ನು ಜಾರಿಗೆ ತರಲಾಯಿತು
3. ಖಾಯಂ ಜಮೀನ್ದಾರಿ ಪದ್ದತಿಯು ರೈತರನ್ನು ‚ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿಸಿ, ಸಾಲದಲ್ಲೇ ಸಾಯುವಂತೆ ಮಾಡಿತು‛. ಹೇಗೆ? ವಿವರಿಸಿ
- ಈ ಪದ್ದತಿಯು ರೈತರ ಭೂ ಮಾಲಿಕತ್ವವನ್ನು ಕಸಿದುಕೊಂಡಿತು
- ಜಮೀನ್ದಾರರು ನಿಗಧಿತ ದರಕ್ಕಿಂತ ಹೆಚ್ಚಿನ ತೆರಿಗೆಯನ್ನು ರೈತರಿಂದ ಸಂಗ್ರಹಿಸುತ್ತಿದ್ದರು
- ರೈತರು ಜಮೀನ್ದಾರರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು
- ಜಮೀನ್ದಾರರು ರೈತರನ್ನು ಶೋಷಣೆಗೊಳಪಡಿಸಿದರಲ್ಲದೇ ರೈತರ ಜೀವನ ಆಭದ್ರತೆಯಿಂದ ಕೂಡಿತು
4. ರೈತವಾರಿ ಪದ್ದತಿಯು ಒಳಗೊಂಡ ಪ್ರಮುಖಾಂಶಗಳಾವುವು?
- ಉಳುವವನನ್ನೇ ಭೂಮಿಯ ಒಡೆಯನೆಂದು ಗುರುತಿಸಿತು
- ಭೂ ಮಾಲಿಕನು ಒಟ್ಟು ಉತ್ಪನ್ನದ 50% ರಷ್ಟನ್ನು ತೆರಿಗೆಯಾಗಿ ನೀಡಬೇಕಾಗಿತ್ತು
- ಭೂ ಕಂದಾಯದ ಪರಿಷ್ಕರಣೆಯ ಅವಧಿ 30 ವರ್ಷಗಳಾಗಿತ್ತು
- ತೆರಿಗೆ ಸಂಗ್ರಹಿಸಲು ಬ್ರಿಟೀಷರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು
5. ಬ್ರಿಟೀಷ ಕಂದಾಯ ನೀತಿಗಳಿಂದಾದ ಪರಿಣಾಮಗಳಾವುವು?
- ಈ ಪದ್ದತಿಯಿಂದ ಕಂಪನಿಗೆ ನಿರಂತರವಾಗಿ ನಿಗಧಿತ ಕಂದಾಯ ಸಂದಾಯವಾಗತೊಡಗಿತು
- ಕಂಪನಿಯು ಭಾರತೀಯ ರೈತರನ್ನು ಶೋಷಣೆ ಮಾಡಿತು
- ರೈತರು ಭೂ ಮಾಲಿಕತ್ವವನ್ನು ಕಳೆದುಕೊಂಡರು
- ನಿಗಧಿತ ದರಕ್ಕಿಂತ ಹೆಚ್ಚಿನ ಕಂದಾಯವನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು
6. ಬ್ರಿಟೀಷ ಶಿಕಣ ದಿಂದ ಉಂಟಾದ ಪರಿಣಾಮಗಳನ್ನು ಪಟ್ಟಿಮಾಡಿ
- ಇಂಗ್ಲೀಷ ಶಿಕಣ ವು ಜಾರಿಗೆ ಬಂದಿತು
- ಭಾರತೀಯರಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಹಾಗೂ ವಿಮರ್ಶಾತ್ಮಕ ಜ್ಞಾನ ಭೆಳೆಯಿತು
- ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಪೋಷಿಸಲ್ಪಟ್ಟಿತು
- ಭಾರತದ ಸ್ವಾತಂತ್ರ ಹೋರಾಟಕ್ಕೆ ಸ್ಪೂರ್ತಿ ಲಭಿಸಿತು
7. ರೆಗ್ಯೂಲೇಟಿಂಗ್ ಕಾಯ್ದೆ ಹೊಂದಿದ್ದ ನಿಬಂಧನೆಗಳಾವುವು?
- ಬಂಗಾಳ ಪ್ರೆಸಿಡೆನ್ಸಿಯು ಇತರ ಎಲ್ಲಾ ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಹೊಂದಿತು
- ಬಂಗಾಳದ ಗವರ್ನರ್ ಹುದ್ದೆಯನ್ನು ಭಾರತದ ಗವರ್ನರ್ ಜನರಲ್ ಎಂದು ಬದಲಾಯಿಸಲಾಯಿತು
- ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪಿಸಲಾಯಿತು
- ಲಾರ್ಡ್ ವಾರನ್ ಹೇಸ್ಟಿಂಗ್ಸ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡನು
8. 1858ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?
- ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರ ಸನ್ನದನ್ನು ರದ್ದುಪಡಿಸಲಾಯಿತು
- ಭಾರತದ ಆಳ್ವಿಕೆಯನ್ನು ಬ್ರಿಟೀμï ರಾಣಿಯ ನಿಯಂತ್ರಣಕ್ಕೆ ಒಪ್ಪಿಸಲಾಯಿತು
- ಗವರ್ನರ್ ಜನರಲ್ಷಿ ಹುದ್ದೆಯನ್ನು ‘ವೈಸರಾಯ್’ ಎಂದು ಬದಲಾಯಿಸಲಾಯಿತು.
- ಲಾರ್ಡ್ ಕ್ಯಾನಿಂಗ್ ಪ್ರಥಮ ವೈಸರಾಯ್ ಆಗಿ ನೇಮಿಸಲ್ಪಟ್ಟನು
9. 1935ರ ಭಾರತ ಸರ್ಕಾರ ಕಾಯ್ದೆ ‚ಭಾರತ ಸಂವಿಧಾನದ ಬುನಾದಿ‛ ಸಮರ್ಥಿಸಿ
- ಭಾರತ ಸಂವಿಧಾನದ ಅನೇಕ ನಿಮಂಧನೆಗಳಿಗೆ ಈ ಕಾಯ್ದೆಯೇ ಆಧಾರವಗಿದೆ
- ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚನೆಗೆ ಈ ಕಾಯಿದೆ ಅವಕಾಶ ನೀಡಿತು
- ದೇಶಿಯ ಸಂಶ್ಥಾನಗಳು, ಬ್ರಿಟೀμï ಸಂಸ್ಥಾನಗಳನ್ನೊಳಗೊಂಡ ಒಕ್ಕೂಟ ರಚನೆಗೆ ಅವಕಾಶ ನೀಡಿತು
- ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ ನೀಡಿತು
10. 1919ರ ಭಾರತ ಸರ್ಕಾರ ಕಾಯ್ದೆಯ ಪ್ರಮುಖ ಅಂಶಗಳಾವುವು?
- ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು
- ಭಾರತಕ್ಕೆ ಒಬ್ಬ ಹೈ ಕಮೀಷನರ್ ನೇಮಕ ಮಾಡಲು ಸೂಚಿಸಿತು
- ಪ್ರಾಂತೀಯ ಆಯವ್ಯಯವನ್ನು ಕೇಂದ್ರ ಆಯವ್ಯಯದಿಂದ ಪ್ರತ್ಯೇಕಿಸಲಾಯಿತು
- ಮುಸಲ್ಮಾನರು, ಸಿಖ್ಖರು ಹಾಗೂ ಆಂಗ್ಲೋ ಇಂಡಿಯನ್ನರಿಗೆ ‚ಪ್ರತ್ಯೇಕ ಚುನಾವಣಾ ಮತಗಟ್ಟೆ‛ಗಳನ್ನು ನಿಗಧಿ ಪಡಿಸಿತು
ಸೂಪರ್
ReplyDelete